ನವಲಗುಂದದಲ್ಲಿ “ಗುಮ್ಮಗೋಳ ತಲಾಟಿ” ನೇಣಿಗೆ ಶರಣು…!!
1 min readನವಲಗುಂದ: ವಯಕ್ತಿಕ ಕಾರಣಗಳಿಂದ ಬೇಸತ್ತು ತಲಾಟಿಯೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನವಲಗುಂದ ಪಟ್ಟಣದ ಹುಲ್ಲುಮಾರುವ ಪೇಟೆಯ ಮನೆಯಲ್ಲಿ ಸಂಭವಿಸಿದೆ.
ಮಹೇಶ ಮಂತ್ರಿ ಎಂಬಾತನೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಮಹೇಶ ಹಲವು ವರ್ಷಗಳಿಂದ ನವಲಗುಂದ ಪಟ್ಟಣದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕೆಲವು ತಿಂಗಳ ಹಿಂದಷ್ಟೇ ಗುಮ್ಮಗೋಳಗೆ ವರ್ಗಾವಣೆಯಾಗಿದ್ದರು.
ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿರುವ ಮಹೇಶ ಮಂತ್ರಿ ಯಾವ ಕಾರಣದಿಂದ ಸಾವಿಗೀಡಾಗಿದ್ದಾರೆಂಬ ನಿಖರ ಮಾಹಿತಿ ಗೊತ್ತಾಗಿಲ್ಲ.
ಪ್ರಕರಣವನ್ನ ದಾಖಲು ಮಾಡಿಕೊಂಡಿರುವ ನವಲಗುಂದ ಠಾಣೆ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.