Posts Slider

Karnataka Voice

Latest Kannada News

ಸಮಸ್ಯೆರಹಿತ ನವಲಗುಂದ ಮಾಡಲು ಶಾಸಕ ಶಂಕರ ಪಾಟೀಲಮುನೇನಕೊಪ್ಪ ಕರೆ

1 min read
Spread the love

ನವಲಗುಂದ: ಜನಪರ ಕಾಳಜಿಯಿಟ್ಟುಕೊಂಡು ದೇವರ ಸ್ಮರಣೆ ಮಾಡುತ್ತ ಮುನ್ನಡದರೇ ತಾಲೂಕು ಸಮಸ್ಯೆರಹಿತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಾಸಕ ಶಂಕರ ಪಾಟೀಲಮುನೇನಕೊಪ್ಪ ಹೇಳಿದರು.

ಪಟ್ಟಣದಲ್ಲಿ ಆಯೋಜನೆಗೊಂಡಿದ್ದ ಪೂಜ್ಯರ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕರು ಮಾತನಾಡಿದರು. ಮನುಷ್ಯ ವ್ಯಕ್ತಿಗಿಂತ ನಂಬಿದ ದೇವರನ್ನ ಪೂಜಿಸುತ್ತಾನೆ. ಅದೇ ಕಾರಣಕ್ಕೆ ಅವನಿಗೆ ಒಳ್ಳೆತದಾಗತ್ತೆ ಎಂದರು.
ಶ್ರೀ ದಿಂಗಾಲೇಶ್ವರ ಸ್ವಾಮೀಜಿಗಳನ್ನ ಕೊಂಡಾಡಿದ ಶಾಸಕ ಮುನೇನಕೊಪ್ಪ, ಶ್ರೀ ಮಠಕ್ಕೆ ಹೋದ ಪ್ರತಿಯೊಬ್ಬರಿಗೆ ಹೊಟ್ಟೆ ತುಂಬ ಊಟ ಸಿಗತ್ತೆ. ಹಾಗಾಗಿಯೇ ಮಠಗಳ ಪಾವಿತ್ರ್ಯತೆ ಉಳಿದಿದೆ ಎಂದರು.
ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಶ್ರೀಗಳು, ಗವಿಮಠದ ಬಸವಲಿಂಗ ಸ್ವಾಮಿಗಳು, ಹಿರೇಮಠ ಪಂಚಗ್ರಹದ ಸಿದ್ದೇಶ್ವರ ಸ್ವಾಮಿಗಳು, ಅಜಾತ ನಾಗಲಿಂಗೇಶ್ವರ ಮಠದ ವೀರೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಅಣ್ಣಪ್ಪ ಬಾಗಿ, ಸಕ್ರಪ್ಪಾ ಹಳ್ಳದ, ಶಿವಾಜಿ ಕಲಾಲ, ಶಿವಾಜಿ ಪವಾರ, ಮೈಲಾರಪ್ಪ ಕಮತರ, ಬಸವರಾಜ ಅಕ್ಕಿ, ರಾಯನಗೌಡ ಪಾಟೀಲ, ಗಂಗಾಧರ ಹಳ್ಳದ, ಚನ್ನಪ್ಪ ನಾಗರಳ್ಳಿ, ಮಂಜುನಾಥ ಶಂಕ್ರಣ್ಣವರ (ಆರೆರ), ಸುರೇಶ ತೋಟಗೇರ, ನೇತಾಜಿ ಕಲಾಲ, ರಾಜು ಹಿರಗಣ್ಣವರ ಸೇರಿದಂತೆ ಹಲವರು ಉಪಸ್ಥಿತರಿದ್ದರು


Spread the love

Leave a Reply

Your email address will not be published. Required fields are marked *