ವರದಿಗಾರನ ಸೋಗಿನಲ್ಲಿದ್ದವನಿಂದ 137 ಗ್ರಾಂ ಚಿನ್ನ ವಶ: ನವಲಗುಂದ ಪೊಲೀಸರ ಭರ್ಜರಿ ಬೇಟೆ
1 min readಧಾರವಾಡ: ವರದಿಗಾರನೆಂದು ಹೇಳಿಕೊಂಡಿದ್ದ ಯುವಕನೋರ್ವ ಮತ್ತೋರ್ವನ ಜೊತೆಗೂಡಿ ಮನೆಗಳ್ಳತನ ಮಾಡಿದ ಘಟನೆಯನ್ನ ಪತ್ತೆ ಹಚ್ಚುವಲ್ಲಿ ನವಲಗುಂದ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಮಾಲು ಸಮೇತ ಇಬ್ಬರನ್ನ ಬಂಧನ ಮಾಡಲಾಗಿದೆ.
ನವಲಗುಂದ ತಾಲೂಕಿನ ಹಾಳಕುಸುಗಲ್ ಗ್ರಾಮದ ಶ್ರೀನಿವಾಸ ಬೆಳವಡಿ ಎಂಬುವವರ ಮನೆಗಳ್ಳತನದ ತನಿಖೆ ನಡೆಸಿದ್ದ ಪೊಲೀಸರು ಅದೇ ಗ್ರಾಮದ ಶಿವಪ್ಪ ಸಿದ್ದಲಿಂಗಪ್ಪ ಮೊರಬದ ಹಾಗೂ ವರದಿಗಾರನೆಂದು ಹೇಳಿಕೊಂಡಿರುವ ಶ್ರೀಕಾಂತ ಮಲ್ಲಿಕಾರ್ಜುನ ಭದ್ರಣ್ಣನವರ ಬಂಧಿಸಿದ್ದಾರೆ. ಬಂಧಿತರಿಂದ ಬಂಗಾರದ ಪಾಟ್ಲಿ, ಬಿಲಾವರ, ಚೈನ್ ಸೇರಿದಂತೆ 137 ಗ್ರಾಂ ಬಂಗಾರದ ಆಭರಣಗಳನ್ನ ವಶಕ್ಕೆ ಪಡೆದಿದ್ದಾರೆ. ಎಲ್ಲ ಚಿನ್ನಾಭರಣದ ಮೊತ್ತ 6ಲಕ್ಷ 41ಸಾವಿರದಾ 490 ರೂಪಾಯಿಯಷ್ಟಿದೆ.
ಕಾರ್ಯಾಚರಣೆಯನ್ನ ಸಿಪಿಐ ಚಂದ್ರಶೇಖರ ಮಠಪತಿ ನೇತೃತ್ವದಲ್ಲಿ ಪಿಎಸೈ ಜಯಪಾಲ ಪಾಟೀಲ, ಪಿಎಸೈ ರಾಘವೇಂದ್ರ ಎಸ್, ಸಿಬ್ಬಂದಿಗಳಾದ ಬಿ.ಎಂ.ಸೋಗಿ, ಎಸ್.ಬಿ.ಹುರಳಿ, ಬಿ.ಆರ್.ಬನಹಟ್ಟಿ, ರಾಜೇಶ ವಿಭೂತಿ, ಸಚಿನ ಪಾಟೀಲ, ಎಚ್.ಎಲ್.ಮಲ್ಲಿಗವಾಡ, ಎಸ್.ಎಸ್.ಹಿರೇಮಠ, ಸಿದ್ಧರಾಮ ಖಟ್ಟೆ, ಪರಪ್ಪ ಯಲ್ಲಟ್ಟಿ ಆರೋಪಿಗಳ ಪತ್ತೆಗಾಗಿ ತನಿಖೆಯಲ್ಲಿ ಭಾಗವಹಿಸಿದ್ದರು.