Posts Slider

Karnataka Voice

Latest Kannada News

ನರೇಂದ್ರ ಗ್ರಾಮ ಪಂಚಾಯತಿ ಬಿಜೆಪಿ ಮಡಿಲಿಗೆ..!

Spread the love

ಧಾರವಾಡ: ತೀವ್ರ ಕುತೂಹಲ ಕೆರಳಿಸಿದ ಧಾರವಾಡ ತಾಲೂಕಿನ ನರೇಂದ್ರ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ಬಿಜೆಪಿ ಬೆಂಬಲಿತ ಸದಸ್ಯರು ಪಡೆಯುವ ಮೂಲಕ, ನರೇಂದ್ರ ಗ್ರಾಮ ಪಂಚಾಯತಿ ಬಿಜೆಪಿಗೆ ಮಡಿಲಿಗೇರಿದೆ.

ನರೇಂದ್ರ ಗ್ರಾಮ ಪಂಚಾಯತಿಗೆ ಅಧ್ಯಕ್ಷರಾಗಿ ಗಂಗವ್ವ ನಿರಂಜನ, ಉಪಾಧ್ಯಕ್ಷರಾಗಿ ಆತ್ಮಾನಂದ ಹುಂಬೇರಿಯವರು ಆಯ್ಕೆಯಾಗಿದ್ದು, ಬಿಜೆಪಿಯಲ್ಲಿ ಮತ್ತಷ್ಟು ಹುಮ್ಮಸ್ಸು ಇಮ್ಮಡಿಸಿದೆ.

ಮೊದಲು 30 ತಿಂಗಳ ಅವಧಿಗೆ ನರೇಂದ್ರ ಗ್ರಾಮ ಪಂಚಾಯತಿಗೆ ಮಹಿಳಾ ಅ ವರ್ಗ ಮೀಸಲಾತಿ ಬಂದಿತ್ತು. ಉಪಾಧ್ಯಕ್ಷ ಸ್ಥಾನ ಜನರಲ್ ವಿಭಾಗದ ಮೀಸಲಾತಿ ಬಂದಿದ್ದರಿಂದ, ಇಂದು ಆಯ್ಕೆಯಾದ ಇಬ್ಬರೇ ನಾಮಪತ್ರ ಸಲ್ಲಿಸಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪಕ್ಷದ ಚಿನ್ಹೆ ಇಲ್ಲದಿದ್ದರೂ ಪಕ್ಷದ ಸಂಘಟನೆಯಿಂದ ಹೆಚ್ಚು ಸದಸ್ಯರು ಗೆದ್ದು ಬಂದಿದ್ದರು. ಇದೀಗ ಎಲ್ಲವೂ ಸಲೀಸಾಗಿ ನಡೆದಿದ್ದು, ಕಾರ್ಯಕರ್ತರು ಸಂತಸಗೊಂಡಿದ್ದಾರೆ.

ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಮುಗಿಯುತ್ತಿದ್ದ ಹಾಗೇ ಗ್ರಾಮದ ಪ್ರಮುಖ ದೇವಸ್ಥಾನಗಳಿಗೆ ಹೋಗಿ ವಿಶೇಷ ಪೂಜೆಯನ್ನ ಸಲ್ಲಿಸಲಾಯಿತು. ಬಿಜೆಪಿ ಗ್ರಾಮೀಣ ಅಧ್ಯಕ್ಷ ಕುಮಾರ ದೇಸಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *