ನರೇಂದ್ರದಲ್ಲಿ “ಅಂದರ್-ಬಾಹರ್” ರೇಡ್ ವೇಳೆ ಹಲ್ಲೆ: PSI, HC, PC ಆಸ್ಪತ್ರೆ ಪಾಲು…!!

ಧಾರವಾಡ: ದೀಪಾವಳಿ ಅಮವಾಸ್ಯೆಯ ದಿನ ನರೇಂದ್ರ ಗ್ರಾಮದ ಶಾಲೆಯ ಬಳಿ ಜೂಜಾಟವಾಡುತ್ತಿರುವ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಪೊಲೀಸರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಆರಕ್ಷಕರು ಸಿವಿಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಘಟನೆಯ ಬಗ್ಗೆ ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ…
ಘಟನೆಯಲ್ಲಿ ಹತ್ತು ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದ್ದು, ಗ್ರಾಮೀಣ ಪಿಎಸ್ಐ (ಕಾನೂನು ಸುವ್ಯವಸ್ಥೆ ) ಬಸನಗೌಡ ಬಿ. ಎಂ, ಹೆಡ್ಕಾನ್ಸಟೇಬಲ್ (HC585)ನಾಗರಾಜ್ ಹಳವರ,
Apc ಶಿವಾನಂದ ಹುಬ್ಬಳ್ಳಿ ಮೇಲೆ ಹಲ್ಲೆ ನಡೆದಿದೆ. ಪಿಎಸ್ಐ ಅವರ ಮೊಬೈಲ್ ಕೂಡಾ ಕಾಣೆಯಾಗಿದೆಯಂತೆ.
ಗ್ರಾಮೀಣ ಭಾಗದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಿದ್ದು, ಮತ್ತೆ ಬೇರೆ ದಿಕ್ಕು ಪಡೆಯುತ್ತಿದೆ.