Posts Slider

Karnataka Voice

Latest Kannada News

ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ: ಶ್ಯಾಮ್ ಜಾಧವ “ಇಬ್ಬರು ಮಕ್ಕಳು” ಅಂದರ್…!!!

1 min read
Spread the love

ಹುಬ್ಬಳ್ಳಿ: ವಾಣಿಜ್ಯನಗರಿಯ ಪ್ರಜ್ಞಾವಂತರಲ್ಲಿ ಜಿಗುಪ್ಸೆ ಮೂಡಿಸಿದ್ದ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ಯಾಮ್ ಜಾಧವರ ಎರಡು ಮಕ್ಕಳು ಸೇರಿದಂತೆ ಹಲವರನ್ನ ಪೊಲೀಸರು ಬಂಧಿಸಿದ್ದಾರೆ.

Inspector Jayapal Patil

ಮೊದಲ ವೀಡಿಯೋ ವೈರಲ್ ಆದ ಸಮಯದಲ್ಲಿ ಶ್ಯಾಮ್ ಜಾಧವ ಪುತ್ರ ಗಣೇಶನನ್ನ ಬಂಧನ ಮಾಡಲಾಗಿತ್ತು. ನಂತರ ನಿನ್ನೆ ಅವರ ಇನ್ನೊಬ್ಬ ಪುತ್ರ ಅಭಿಷೇಕನನ್ನೂ ಬಂಧನ ಮಾಡಲಾಗಿದೆ. ಈತನ ಜೊತೆಗೆ ರಾಹುಲ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.

ಸಂದೀಪ ಸಾಳುಂಕೆ ಎಂಬ ಯುವಕನನ್ನ ತಂದು ಅಮಾನುಷವಾಗಿ ನಡೆದುಕೊಂಡ ವೀಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಐವರನ್ನ ಬಂಧಿಸಲಾಗಿತ್ತು.

ಇದಾದ ನಂತರ ಠಾಣೆಯ ಇನ್ಸಪೆಕ್ಟರ್ ಬುದ್ನಿಯವರನ್ನ ಬದಲಾವಣೆ ಮಾಡಿ ದಕ್ಷ ಅಧಿಕಾರಿ ಜಯಪಾಲ ಪಾಟೀಲರನ್ನ ಪ್ರಭಾರಿಯಾಗಿ ನೇಮಕ ಮಾಡಲಾಗಿದ್ದು, ಪ್ರಕರಣದಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನೂ ಹೆಡಮುರಿಗೆ ಕಟ್ಟಲಾಗುತ್ತಿದೆ. ಕೆಲವರು ಹುಬ್ಬಳ್ಳಿ ತೊರೆದಿದ್ದು, ಅವರ ಬಂಧನಕ್ಕೆ ಜಾಲ ಬೀಸಲಾಗಿದೆ.


Spread the love

Leave a Reply

Your email address will not be published. Required fields are marked *