ಆಟೋ ಚಾಲಕರಿಗಾಗಿ ಮಿಡಿದ ನಾಗರಾಜ ಗೌರಿ…!

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಅಭಿಮಾನಿ ಬಳಗದ ವತಿಯಿಂದ ಆಟೋರಿಕ್ಷಾ ಚಾಲಕರಿಗೆ ಆಹಾರ ಪದಾರ್ಥಗಳ ಕಿಟ್ ಗಳನ್ನ ವಿತರಣೆ ಮಾಡಲಾಗುತ್ತಿದೆ.

ಇಂದು ಅಮರಗೋಳದಲ್ಲಿ ನಾಗರಾಜ ಗೌರಿ ಗೆಳೆಯರ ಬಳಗದಿಂದ ನವನಗರ, ಸುತಗಟ್ಟಿ ಅಮರಗೋಳ, ರಾಯಪುರ ಗಾಮನಗಟ್ಟಿ ಗ್ರಾಮಗಳ ಆಟೋ ರಿಕ್ಷಾ ಚಾಲಕರಿಗೆ 300 ಆಹಾರ ಪದಾರ್ಥಗಳ ಕಿಟ್ ಗಳನ್ನ ವಿತರಿಸಲಾಯಿತು.
ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ಗೌರಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಷಣ್ಮುಖ ಬೆಟಗೇರಿ, ಕಾಶೀಮಸಾಬ ದರ್ಗಾದ, ಬಸವರಾಜ ಮನಗುಂಡಿ, ಶಿವಲಿಂಗಣ್ಣ ನಾಗಣ್ಣವರ, ಕಲ್ಲಪ್ಪ ವಾಲಿಕಾರ, ಲಕ್ಶ್ಮೀ ಗುತ್ತೆ, ತ್ರಿಶೀಲ ಎಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.