Posts Slider

Karnataka Voice

Latest Kannada News

ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷರಾಗಿ ಬಹುತೇಕ ನಾಗರಾಜ್ ಛಬ್ಬಿ ಫಿಕ್ಸ್….!

Spread the love

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಅನಿಲಕುಮಾರ ಪಾಟೀಲರ ಸ್ಥಾನಕ್ಕೆ ಬಹುತೇಕ ವಿಧಾನಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಫಿಕ್ಸ್ ಎಂದು ಹೇಳಲಾಗುತ್ತಿದೆ.

ಹಲವು ದಿನಗಳಿಂದಲೂ ಜಿಲ್ಲಾ ಅಧ್ಯಕ್ಷರ ಬದಲಾವಣೆ ಆಗಬಹುದೆಂಬ ಲೆಕ್ಕಾಚಾರವಿತ್ತಾದರೂ, ಅದೀಗ ನಡೆದಿದೆ. ಹೀಗಾಗಿ, ಇದೇ ಸಮಯದಲ್ಲಿ ನಾಗರಾಜ ಛಬ್ಬಿಯವರನ್ನ ಅಧ್ಯಕ್ಷರನ್ನಾಗಿ ಘೋಷಣೆ ಮಾಡುವುದೊಂದೆ ಬಾಕಿಯಿದೆ ಎಂದು ಹೇಳಲಾಗುತ್ತಿದೆ.

ಜಿಲ್ಲೆಯಲ್ಲಿ ಈ ಹಿಂದೆಯೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ನಾಗರಾಜ ಛಬ್ಬಿಯವರಿಗೆ, ಮತ್ತೊಂದು ಅವಕಾಶವನ್ನ ನೀಡಲು ಕೆಪಿಸಿಸಿ ಮುಂದಾಗಿರುವುದು ಬಹುತೇಕರಲ್ಲಿ ಕೇಳಿ ಬರುತ್ತಿದೆ.

ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಈಗಾಗಲೇ ಮಾಜಿ ಸಚಿವರುಗಳಾದ ವಿನಯ ಕುಲಕರ್ಣಿ ಹಾಗೂ ಸಂತೋಷ ಲಾಡ ಅವರನ್ನ ಕೆಪಿಸಿಸಿ ಉಪಾಧ್ಯಕ್ಷರುಗಳನ್ನಾಗಿ ಮಾಡಿರುವುದನ್ನ ಇಲ್ಲಿ ಸ್ಮರಿಸಬಹುದಾಗಿದೆ.


Spread the love

Leave a Reply

Your email address will not be published. Required fields are marked *