ಶಿವಾನಂದ ಮುತ್ತಣ್ಣನವರೂ.. ಆ ರಸ್ತೆಯೂ.. ಯಾರೇನ್ ಅವರಪ್ಪನ ಮನಿಯಿಂದ ತಂದ್ ಹಾಕ್ಯಾರೇನ್..!
1 min readಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದಿಂದ ಉಚ್ಚಾಟನೆಗೊಂಡಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣನವರ ಹೋದಲೆಲ್ಲಾ ಒಂದಿಲ್ಲಾ ಒಂದು ರಗಳೆಯನ್ನ ಮಾಡಿಕೊಳ್ಳುತ್ತಿದ್ದಾರಾ ಎಂಬ ಪ್ರಶ್ನೆ ಮೂಡುವಂತಹ ಘಟನೆಯ ದೃಶ್ಯಗಳು ವೈರಲ್ ಆಗಿದ್ದು, ವೀಡಿಯೋದಲ್ಲಿ ಹಿರಿಯ ರಾಜಕಾರಣಿಗಳ ಬಗ್ಗೆ ಅಸಹ್ಯಕರವಾಗಿ ಮಾತನಾಡಿದ್ದರಿಂದ ಅದನ್ನ ಇಲ್ಲಿ ಹಾಕಲಾಗುತ್ತಿಲ್ಲ.
ಹುಬ್ಬಳ್ಳಿ ವೀರಾಪುರ ಓಣಿಯ ರುದ್ರದೇವನಹಕ್ಕಲದಲ್ಲಿ ಇರುವ ಕರೆಮ್ಮನ ಗುಡಿಯ ಹತ್ತಿರ ರಸ್ತೆ ಕಾಮಗಾರಿ ನಡೆಯುತ್ತಿದ್ದಾಗ, ಹೋಗಿರುವ ಶಿವಾನಂದ ಮುತ್ತಣ್ಣನವರ ಸ್ಥಳೀಯರೊಂದಿಗೆ ಮಾತಿಗೆ ಇಳಿದಿದ್ದಾರೆ. ಆಗ ಅಲ್ಲಿಯೇ ಇದ್ದ ಯುವಕನೋರ್ವ ತೀವ್ರ ಆಕ್ರೋಶದಿಂದ ಮಾತನಾಡಿದ್ದು, ಹಿರಿಯ ರಾಜಕಾರಣಿಗಳ ಬಗ್ಗೆ ಕೇವಲವಾಗಿ ಮಾತನಾಡಿದ್ದಾನೆ.
ಕಾಮಗಾರಿ ವೀಕ್ಷಣೆಯ ನೆಪದಲ್ಲಿ ನಡೆದ ಈ ಮಾತಿನ ಚಕಮಕಿ ನೋಡುಗರಲ್ಲಿ ಅಚ್ಚರಿಯೂ, ಆಕ್ರೋಶವನ್ನ ಮೂಡಿಸುವಂತೆ ನಡೆದಿದೆ. ಆದರೆ, ಯುವಕನ ಮಾತಿಗೆ ಏನೊಂದು ಮಾತನಾಡದ ಸ್ಥಿತಿಗೆ ಶಿವಾನಂದ ಮುತ್ತಣ್ಣನವ ತಲುಪಿದ್ದು, ವಿಚಿತ್ರವಾಗಿದೆ.
ರಸ್ತೆ ಕಾಮಗಾರಿಯನ್ನ ಮಾಡಿಸುತ್ತಿರುವುದು ಯಾರೂ ಮತ್ತು ಯಾರ ಫಂಡ ಎನ್ನುವ ಮಾತಿಗೆ ಇಷ್ಟೇಲ್ಲಾ ರಗಳೆಗಳು ಆರಂಭವಾಗಿದ್ದು, ಮೊನ್ನೆ ಮೊನ್ನೆ ಶಾಸಕ ಪ್ರಸಾದ ಅಬ್ಬಯ್ಯ ಅವರ ಜೊತೆಗೂ ಮಾತಿಗೆ ಮಾತು ಬೆಳೆಸಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.