Posts Slider

Karnataka Voice

Latest Kannada News

ಹುಬ್ಬಳ್ಳಿ-ಧಾರವಾಡದ “ನರಹಂತಕನ ಬಂಧನ”- ಪ್ರತಿಕ್ಷಣವೂ ಹೆಚ್ಚಾಗುತ್ತಿದೆ ಕೊಂದವರ ಸಂಖ್ಯೆ…!

Spread the love

ಹುಬ್ಬಳ್ಳಿ: ಅವಳಿನಗರವೇ ಬೆಚ್ಚಿ ಬೀಳುವಂತಹ ನರಹಂತಕನನ್ನ ಕಮೀಷನರೇಟಿನ ಪೊಲೀಸರು ಬಂಧನ ಮಾಡಿದ್ದು, ಅವಳಿನಗರದ ಕ್ರೈಂ ಇತಿಹಾಸದಲ್ಲೇ ಎಂದೆಂದೂ ಕಾಣದ, ಕೇಳದ ಪ್ರಕರಣವನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಅವಳಿನಗರದ ಪ್ರಮುಖ ಪ್ರದೇಶವೊಂದರಲ್ಲಿ ನಡೆದ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದಾಗ, ಸಿಕ್ಕ ಆರೋಪಿಗಳಿಂದ ಪೊಲೀಸರೇ ದಂಗಾಗಿದ್ದಾರೆ. ಅಂತಹ ಸ್ಪೋಟಕ ಮಾಹಿತಿಗಳು ಹೊರ ಬೀಳತೊಡಗಿವೆ.

ಬಂಧಿತರಿಂದ ಸಿಗುತ್ತಿರುವ ಮಾಹಿತಿಯಿಂದ ಮತ್ತಷ್ಟು ತನಿಖೆಗೆ ಮುಂದಾಗಿರುವ ಪೊಲೀಸರು, ಆರೋಪಿಯನ್ನ ಕಸ್ಟಡಿಗೆ ಪಡೆದುಕೊಂಡು ಒಂದೊಂದೆ ಮಾಹಿತಿಯನ್ನ ಹೊರ ತೆಗೆಯುತ್ತಿದ್ದಾರೆ.

ನರಹಂತಕ ಆರೋಪಿಯಿಂದ ಹೊರ ಬರುತ್ತಿರುವ ಮಾಹಿತಿಯೂ ಯಾವುದೇ ಸಿನೇಮಾಗೆ ಕಡಿಮೆಯಿಲ್ಲದ್ದಾಗಿದೆ. ಇಂತಹ ಆರೋಪಿಯನ್ನ ಅವಳಿನಗರ ಯಾವತ್ತೂ ಕಂಡೇ ಇಲ್ಲ. ಹೀಗಾಗಿಯೇ ವಿಚಾರಣೆ ಸದ್ದಿಲ್ಲದೇ ನಡೆಯುತ್ತಿದೆ.

ಕೆಲವೇ ಸಮಯದಲ್ಲಿ ಸಂಪೂರ್ಣವಾದ ವೀಡಿಯೋಯೊಂದಿಗೆ ನಿಮ್ಮ ಮುಂದೆ ಮತ್ತಷ್ಟು ಬೆಚ್ಚಿ ಬೀಳಿಸುವಂತಹ ಮಾಹಿತಿಯನ್ನ ಕರ್ನಾಟಕವಾಯ್ಸ್.ಕಾಂ ಹೊರ ಹಾಕಲಿದೆ.


Spread the love

Leave a Reply

Your email address will not be published. Required fields are marked *