Karnataka Voice

Latest Kannada News

ಜೀವ ಭಯದಲ್ಲಿ ನೇಹಾ ಹಿರೇಮಠ ತಂದೆ ನಿರಂಜನಯ್ಯ..!!!

Spread the love

ನೇಹಾ ಹಿರೇಮಠ ತಂದೆ ನಿರಂಜನಯ್ಯನಿಗೆ ಜೀವ ಭಯ; ಹೆಚ್ಚು ಕಡಿಮೆ ಆದ್ರೆ ಬೆರೆಯದ್ದೇ ಸ್ವರೂಪ

ಹುಬ್ಬಳ್ಳಿ: ಒಂದೇಡೆ ನೇಹಾ ಹಿರೇಮಠ ಹತ್ಯೆಯ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ತನಿಖೆಯನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಖುದ್ದು ಸಿಐಡಿ ಡಿಜಿ ಎಂ. ಸಲೀಂ ನೇಹಾ ಹಿರೇಮಠ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ಹೇಳಿದ್ದಾರೆ. ಆದ್ರೆ ಇದೆಲ್ಲದರ ನಡುವೆ ನೇಹಾ ತಂದೆ ಹಿರೇಮಠ ಇದೀಗ ನನಗೆ ಜೀವ ಬೆದರಿಕೆ ಇದೆ. ಏನಾದ್ರು ಹೆಚ್ಚು ಕಡಿಮೆ ಆದ್ರೆ ಅದು ಬೇರೆ ಸ್ವರೂಪ ಪಡೆಯತ್ತೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ವೀಡಿಯೋ..

ಮೊನ್ನೆ ಹುಬ್ಬಳ್ಳಿಯ ಶಿರೂರು ಪಾರ್ಕ್ ಬಳಿಯಲ್ಲಿ ನಿರಂಜನಯ್ಯ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದಾಗ ಅಪರಿಚಿತ ಆಟೋ ಚಾಲಕ ನಿರಂಜನಯ್ಯ ಅವರ ಕಾರಿಗೆ ಅಡ್ಡ ಬಂದು ತೊಂದರೆ ಉಂಟು ಮಾಡಿದ್ದಾನೆ. ಆಗ ಸ್ಥಳೀಯರು ಎಲ್ಲರೂ ಸೇರಿ ಆಟೋ ಚಾಲಕನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಘಟನೆ ನಡೆದ ಬೆನ್ನಲ್ಲೇ ಇದೀಗ ನಿರಂಜನಯ್ಯ ಆತಂಕ ವ್ಯಕ್ತಪಡಿಸಿದ್ದು, ನಮ್ಮ ಮನೆಯ ಸುತ್ತಮುತ್ತ ಅಪರಿಚಿತರು ಓಡಾಡುತ್ತಿದ್ದಾರೆ. ನನಗೆ ಜೀವ ಬೆದರಿಕೆ ಉಂಟಾಗುತ್ತಿದೆ. ನನ್ನ ಜೀವಕ್ಕೆ ಏನಾದ್ರು ಆದ್ರೆ ಅದು ಬೇರೆಯದ್ದೇ ಸ್ವರೂಪ ಪಡೆಯತ್ತೆ ಅಂತಾ ಮಾಧ್ಯಮದ ಮುಂದೆ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.


Spread the love

Leave a Reply

Your email address will not be published. Required fields are marked *