Posts Slider

Karnataka Voice

Latest Kannada News

ಹುಬ್ಬಳ್ಳಿ: ಮಗಳಿಗಾಗಿ “ಮೌಲಾಲಿ” ಕೊಂದು ನೇಣಿಗೆ ಶರಣಾದ “ಪರಸಪ್ಪ”- ವಿಧಿಯಾಟ…!!!

1 min read
Spread the love

ಹುಬ್ಬಳ್ಳಿ: ತನ್ನ ಮಗಳ ಜೊತೆ ಅನೈತಿಕ ಸಂಬಂಧ ಹೊಂದಿದ್ದನೆಂದು ತಿಳಿದುಕೊಂಡು ಯುವಕನನ್ನ ಹತ್ಯೆ ಮಾಡಿ, ತಾನೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯ ಅಪೂರ್ವನಗರದಲ್ಲಿ ಬೆಳಕಿಗೆ ಬಂದಿದೆ.

ನಿನ್ನೆ ಸಿಲ್ವರ್ ಟೌನ್ ಪ್ರದೇಶದಲ್ಲಿ ವಾಚ್‌ಮನ್ ಆಗಿದ್ದ ಮೌಲಾಲಿ ಎಂಬಾತ, ಪರಸಪ್ಪನ ವಿವಾಹಿತ ಮಗಳ ಜೊತೆ ಅನೈತಿಕ ಸಂಬಂಧ ಹೊಂದಿದ್ದನೆಂದು ಹೇಳಲಾಗಿದೆ. ಇದೇ ಕಾರಣಕ್ಕೆ ಪರಸಪ್ಪ, ಮೌಲಾಲಿಯನ್ನ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದ.

ಮೂಲತಃ ಲಕ್ಷ್ಮೇಶ್ವರದ ಪರಸಪ್ಪ, ಹತ್ಯೆ ಮಾಡಿದ ನಂತರ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಆತಂಕದಲ್ಲಿ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ. ಪೊಲೀಸರು ಪ್ರಕರಣದ ಬಗ್ಗೆ ಮಾಹಿತಿ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *