Posts Slider

Karnataka Voice

Latest Kannada News

ಹುಬ್ಬಳ್ಳಿ: ನಸೆಯಲ್ಲಿ ಬಡಿದಾಡಿಕೊಂಡ “ತಂದೆ-ಮಗ” ಕಿಮ್ಸನಲ್ಲಿ ಪ್ರಾಣಬಿಟ್ಟ ‘ಜನಕ’- ಪುತ್ರನ ವಿರುದ್ಧ ‘ಜನನಿ’ ಕಂಪ್ಲೇಂಟ್ Big Exclusive

Spread the love

ಆಸ್ತಿಗಾಗಿ ಅಪ್ಪನನ್ನೇ ಕೊಲೆ ಮಾಡಿದ ಮಗ ಅಣ್ಣಪ್ಪ ಮಗನ ವಿರುದ್ದ ತಾಯಿ ದೂರು

ಹುಬ್ಬಳ್ಳಿ: ಆಸ್ತಿ ವಿಚಾರಕ್ಕೇ ತಂದೆ ಮಗ ಹೊಡೆದಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ತಂದೆ ಚಿಕಿತ್ಸೆ ಫಲಕಾರಿಯಾಗದೇ  ಸಾವನಪ್ಪಿದ್ದು, ಮಗ ಹೆಂಡತಿಯನ್ನು ಕರೆದುಕೊಂಡು ಊರು ಬಿಟ್ಟು ಹೋಗಿದ್ದಾನೆ. ತಂದೆಯನ್ನು ಕೊಲೆ ಮಾಡಿದ ಮಗನ ವಿರುದ್ಧ ತಾಯಿಯೇ ಕೊಲೆ ಪ್ರಕರಣ ದಾಖಲು ಮಾಡಿದ ಘಟನೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನ 77 ವರ್ಷದ ನಾಗರಾಜ ಚಂದ್ರಶೇಖರ್ ಆಗಿದ್ದು, ಮಗ ಅಣ್ಣಪ್ಪ ಕೊಲೆ ಮಾಡಿದ್ದಾನೆ. ಕಳೆದ ನವೆಂಬರ್ 19 ರಂದು ಮನೆಯಲ್ಲಿ ಆಸ್ತಿ ವಿಚಾರಕ್ಕೇ ತಂದೆ ಹಾಗೂ ಮಗನ ನಡುವೆ ಜಗಳ ಆರಂಭವಾಗಿ ವಿಕೋಪಕ್ಕೆ ಹೋಗಿದೆ. ಈ ವೇಳೆ ಇಬ್ಬರು ನಶೆಯಲ್ಲಿದ್ದ ಕಾರಣ ಅಣ್ಣಪ್ಪ ತಂದೆಯ ಮೇಲೆ ಹಲ್ಲೆ ಮಾಡಿದ ಪರಿಣಾಮ ನಾಗರಾಜ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ. ಮಗ ತನ್ನ ಹೆಂಡತಿಯನ್ನು ಕರೆದುಕೊಂಡು ಊರು ಬಿಟ್ಟಿದ್ದ.

Exclusive Video…

ಆದ್ರೆ ನಾಗರಾಜನಿಗೆ ಮಗ ಹೊಡೆದ ಒಳ ಏಟಿನಿಂದ ರವಿವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಕಮಿಷನರ್ ಎನ್ ಶಶಿಕುಮಾರ್ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಶವ ಪರಿಶೀಲನೆ ನಡೆಸಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.


Spread the love

Leave a Reply

Your email address will not be published. Required fields are marked *