Posts Slider

Karnataka Voice

Latest Kannada News

Spread the love

ನವಲಗುಂದ: ಹಾಡುಹಗಲೇ ಒಡಹುಟ್ಟಿದ ಸಹೋದರಿಯನ್ನೇ ಕೊಲೆ ಮಾಡಿರುವ ಘಟನೆಯೊಂದು ನಡೆದಿದ್ದು, ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಮಹಾಂತೇಶ ನಿಂಗಪ್ಪ ಶರಣಪ್ಪನವರ ಎಂಬಾತನೇ ತನ್ನ ತಂಗಿಯನ್ನ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆಯಾದವರನ್ನ ಶಶಿಕಲಾ ನಿಂಗಪ್ಪ ಸುಣಗಾರ ಎಂದು ಗುರುತಿಸಲಾಗಿದೆ.

ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟಿ ಗ್ರಾಮಕ್ಕೆ ಮದುವೆ ಮಾಡಿಕೊಟ್ಟಿದ್ದ ಶಶಿಕಲಾ ಕೆಲವು ದಿನಗಳಿಂದ ಊರಿಗೆ ಬಂದಿದ್ದರು. ಸಹೋದರನ ಜೊತೆಗೆ ಯಾವ ವಿಷಯಕ್ಕೆ ಕಾದಾಟವಾಗಿತ್ತೋ, ಇನ್ನೂ ತಿಳಿದು ಬಂದಿಲ್ಲ.

ಮನೆಯಲ್ಲಿಯೇ ತಂಗಿಯನ್ನ ಹೊಡೆದ ಪರಿಣಾಮ, ಅತೀವ ರಕ್ತಸ್ರಾವವಾಗಿ ಶಶಿಕಲಾ ಸಾವಿಗೀಡಾಗಿದ್ದಾಳೆ. ಪ್ರಕರಣವನ್ನ ದಾಖಲು ಮಾಡಿಕೊಂಡಿರುವ ನವಲಗುಂದ ಠಾಣೆ ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *