Posts Slider

Karnataka Voice

Latest Kannada News

ಮಂಗಳಗಟ್ಟಿಯಲ್ಲಿ “17ರ ಹರೆಯ” ತಂದೆಯನ್ನ ಕೊಚ್ಚಿ ಕೊಂದ.

1 min read
Spread the love

ಕೌಟುಂಬಿಕ ಕಲಹ ಅಪ್ರಾಪ್ತ ಮಗನಿಂದಲೇ ತಂದೆ ಹತ್ಯೆ

ಧಾರವಾಡ: ಅತಿಯಾದ ಕುಡಿತಕ್ಕೆ ಒಳಗಾಗಿದ್ದ ಮನೆಯ ಯಜಮಾನ ಕೌಟುಂಬಿಕ ಕಲಹದ ಘಟನೆಯಲ್ಲಿ ‌ಹೆತ್ತ ಮಗನಿಂದಲೇ ಹತ್ಯೆಯಾಗಿದ್ದಾನೆ.

ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ಪುಂಡಲೀಕ ಒಂಟಿಗಡದ ಎನ್ನುವ ವ್ಯಕ್ತಿ ಕೊಲೆಯಾಗಿ ಹೋಗಿದ್ದಾನೆ.

ಕುಡಿದ ಮತ್ತಿನಲ್ಲಿದ್ದ ಪುಂಡಲೀಕ ಹೆಂಡತಿ- ಮಗ ಹಾಗೂ ತಾಯಿಗೆ ಕೊಡಲಿ ಹಿಡಿದು ಹೊಡೆಯಲು ಹೋಗಿದ್ದ ಸಂದರ್ಭದಲ್ಲಿ ಜಗಳ ಬಿಡಿಸಲು ಬಂದ ಅಪ್ರಾಪ್ತ ಮಗ‌ ಅದೇ ಕೊಡಲಿಯಿಂದ ಹೊಡೆದು ಅಪ್ಪನನ್ನು ಕೊಲೆ ಮಾಡಿದ್ದಾನೆ.

ಈ‌ ಬಗ್ಗೆ ಗರಗ ಪೊಲೀಸ್ ಠಾಣೆಯಲ್ಲಿ ತಂದೆಯ ಕೊಲೆ ಮಾಡಿದ ಅಪ್ರಾಪ್ತ ಹುಡುಗನ ಮೇಲೆ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *