ತಡಕೋಡದವನನ್ನ ಇನಾಂಹೊಂಗಲ ರಸ್ತೆಯಲ್ಲಿ ಬರ್ಭರವಾಗಿ ಹತ್ಯೆ ಮಾಡಿದ “ಕುಸುಗಲ್”ದವ…!!!

ಧಾರವಾಡ: ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ತಡಕೋಡ ಗ್ರಾಮದ ವ್ಯಕ್ತಿ ಬೈಕಿನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಬೆನ್ನು ಬಿದ್ದು ಹತ್ಯೆ ಮಾಡಿರುವ ಘಟನೆ ಉಪ್ಪಿನಬೆಟಗೇರಿ ಬಳಿಯ ಇನಾಂಹೊಂಗಲದ ರಸ್ತೆಯಲ್ಲಿ ಸಂಭವಿಸಿದೆ.
ತಡಕೋಡ ಗ್ರಾಮದ ಸುರೇಶ ದೇವರವರ ಎಂಬುವವರ ಹತ್ಯೆಯನ್ನ ಶಿವಪ್ಪ ಬಡಿಗೇರ ಎಂಬಾತ ಮಾಡಿದ್ದಾನೆಂದು ಹೇಳಲಾಗಿದ್ದು, ರಾಡ್ನಿಂದ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸಾವಿಗೀಡಾಗಿದ್ದಾನೆ.
ಕೊಲೆಗಾರ ಶಿವಪ್ಪ ಬಡಿಗೇರ ಕಳೆದ ಎರಡು ವರ್ಷದ ಹಿಂದೆ ಎರಡನೇಯ ಮದುವೆಯಾಗಿ ಸುರೇಶ ದೇವರವರ ಮನೆಯಲ್ಲೇ ಬಾಡಿಗೆಗಿದ್ದನೆಂದು ಗೊತ್ತಾಗಿದೆ. ಘಟನೆಗೆ ಸಂಬಂಧಿಸಿದಂತೆ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.