Posts Slider

Karnataka Voice

Latest Kannada News

ನೈತಿಕತೆ ಮರೆತ ಅತ್ತಿಗೆ ಮಸಣಕ್ಕೆ-ಮೈದುನ ಜೈಲಿಗೆ: ಸಂಬಂಧಗಳನ್ನ ಹೆಡಮುರಿಗೆ ಕಟ್ಟಿದ ‘ದುಷ್ಟರು’…

1 min read
Spread the love

8 ವರ್ಷದಿಂದ ಅತ್ತಿಗೆ ಜೊತೆ ಅನೈತಿಕ ಸಂಬಂಧ: ಸಾಕು ಎಂದ ಅತ್ತಿಗೆಯನ್ನೇ ಕೊಚ್ಚಿ ಕೊಲೆಗೈದ ಮೈದುನ

ಹುಬ್ಬಳ್ಳಿ: ನಮ್ಮ ಸಮಾಜದಲ್ಲಿ ಅತ್ತಿಗೆ ಹಾಗೂ ಮೈದುನನ ಸಂಬಂಧಕ್ಕೆ ಮಹತ್ವದ ಸ್ಥಾನಮಾನಯಿದೆ. ಅತ್ತಿಗೆ ಅಂದ್ರೆ ಸಾಕು ತಾಯಿ ಸಮಾನ ನೋಡುವ ನಮ್ಮ ಸಮಾಜದಲ್ಲಿ, ಅತ್ತಿಗೆ ಹಾಗೂ ಮೈದುನ ಆ ಸ್ಥಾನಕ್ಕೆ ಅನೈತಿಕ ಎಂಬ ಕಪ್ಪು ಮಸಿಯನ್ನು ಬಳೆದು ಅದೆ ಅನೈತಿಕತೆಯಿಂದ ತನ್ನ ಮೈದುನನಿಂದಲೇ ಹೆಣವಾದ ಅತ್ತಿಗೆ ವರದಿಯಿದು.

ಸುನಂದಾ ಎಂಬಾಕೆಯನ್ನು ಕಳೆದ 10 ವರ್ಷಗಳ ಹಿಂದೆ ಕುಂದಗೋಳ ತಾಲ್ಲೂಕಿನ ಯರಿನಾರಾಯಣಪುರದ ಮಂಜುನಾಥ ಎಂಬವರಿಗೆ ಮದುವೆ ಮಾಡಿ ಕೊಡಲಾಗಿತ್ತು, ಆದ್ರೆ ಮದುವೆಯಾದ ಒಂದೇ ವರ್ಷದಲ್ಲಿ ತನ್ನ ಮೈದುನನಾದ ಮಹಾಂತೇಶ ಜೊತೆ ಸುನಂದಾ ಅಕ್ರಮ ಸಂಬಂಧ ಬೆಳೆಸಿದ್ದಳು.

ಅಷ್ಟೇ ಅಲ್ಲದೇ ಅವನ ಜೊತೆ ಓಡಿ ಹೋಗಿ ಕಲಘಟಗಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಅನೈತಿಕ ಸಂಬಂಧವನ್ನು ಕಳೆದ 8 ವರ್ಷಗಳಿಂದ ನಡೆಸುತ್ತಿದ್ದಳು,ಇದರ ನಡುವೆ ಕಳೆದ ನಾಲ್ಕು ತಿಂಗಳ ಹಿಂದೆ ಸುನಂದಾ ತನ್ನ ತವರು ಮನೆಗೆ ಹೋದಾಗ, ತವರು ಮನೆಯವರು ಸುನಂದಾಳಿಗೆ ಬುದ್ದಿ ಹೇಳಿ ಆಕೆಯ ಮನವೊಲಿಸಿ ಮತ್ತೆ ಗಂಡನ ಮನೆಗೆ ಕಳುಹಿಸಿದ್ದರು.

ಮಹಾಂತೇಶ ಅತ್ತಿಗೆಯನ್ನು ಬಿಟ್ಟಿರಲಾರದೆ ಗುರುವಾರ ಯರಿನಾರಾಯನಪುರ ಆಕೆಯ ಗಂಡನ ಮನೆಗೆ ಬಂದು ನೀನು ನನ್ನ ಜೊತೆ ಬಾ, ನಿನಗೋಸ್ಕರ ನಾನು ಮದುವೆಯಾಗಿಲ್ಲ ನನ್ನ ಜೀವನ ಹೇಗೆ ಎಂದು ಜಗಳ ತೆಗೆದಿದ್ದಾನೆ,ಇದಕ್ಕೆ ಸುನಂದಾ ಒಪ್ಪದೇ ಇದ್ದಾಗ ಕೂಡುಗೋಲಿನಿಂದ ಸುನಂದಾಳ ಕುತ್ತಿಗೆಗೆ ಕಡಿದು ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ.

ಕೂಡಲೇ ಕುಂದಗೋಳ ಠಾಣೆಯ ಇನ್ಸ್ಪೆಕ್ಟರ್ ಮಾರುತಿ ಗುಳಾರಿ ಗೊತ್ತಾಗುತ್ತಿದ್ದ ಹಾಗೆ ಸ್ಥಳಕ್ಕೆ ಭೇಟಿ,ನೀಡಿ ಪರಿಶೀಲನೆ ನಡೆಸಿದ್ದಲದೇ,ಪರಾರಿಯಾಗಿದ್ದ ಮಹಾಂತೇಶ ನನ್ನು ಬಂಧನ ಮಾಡಿದ್ದು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಒಟ್ಟಿನಲ್ಲಿ ನೈತಿಕತೆಯಿಂದ ತನ್ನ ಗಂಡನ ಜೊತೆ ಬಾಳ್ವೆ ಮಾಡಬೇಕಾದ ಸುನಂದಾ ಮೈದುನನ ಜೊತೆ ಅನೈತಿಕ ಸಂಬಂಧ ಬೆಳೆಸಿ ದುರಂತ ಸಾವು ಕಂಡರೆ ಇತ್ತ ಮಹಾಂತೇಶ ಜೈಲು ಸೇರಿದ್ದಾನೆ.


Spread the love

Leave a Reply

Your email address will not be published. Required fields are marked *

You may have missed