Posts Slider

Karnataka Voice

Latest Kannada News

ಕಾರವಾರದ ನಡು ರಸ್ತೆಯಲ್ಲಿ ಹೆಣವಾದ ನಗರಸಭೆ ಮಾಜಿ ಸದಸ್ಯನ ಮೇಲೆ “ಸಾಲು ಸಾಲು ಕೇಸ್”- ಸತ್ಯ ಬಹಿರಂಗ….

Spread the love

ಕಾರವಾರ: ಬೆಳಗಿನ ವಾಯು ವಿಹಾರಕ್ಕೆ ಹೊರಟಿದ್ದ ನಗರಸಭೆಯ ಮಾಜಿ ಸದಸ್ಯನನ್ನ ಸಾರ್ವಜನಿಕರ ಎದುರೇ ಕೊಚ್ಚಿ ಕೊಲೆ ಮಾಡಿರುವ ಪ್ರಕರಣ ಕಾರವಾರ ನಗರದ ಬಿಎಸ್‌ಎನ್ಎಲ್‌ ಕಚೇರಿ ಬಳಿ ಸಂಭವಿಸಿದೆ.

ಉತ್ತರಕನ್ನಡ ಜಿಲ್ಲೆಯ ಕಾರವಾರದ ನಗರಸಭೆ ಮಾಜಿ ಸದಸ್ಯ ಸತೀಶ್ ಕೋಳಂಕರ್ ಕೊಲೆಯಾದ ವ್ಯಕ್ತಿಯಾಗಿದ್ದು, ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಹತ್ಯೆ ನಡೆದಿರುವ ಕುರಿತು ಶಂಕೆ ವ್ಯಕ್ತಪಡಿಸಲಾಗಿದೆ.

ಹತ್ಯೆಯಾದವರ ಬಗ್ಗೆ ಮಗಳು ಪೂರ್ಣಿಮಾ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಅವರ ಹೇಳಿಕೆ ಇಲ್ಲಿದೆ ನೋಡಿ..

ಮಾಜಿ ನಗರಸಭಾ ಸದಸ್ಯನಾಗಿರುವ ಸತೀಶ್, ಇತ್ತಿಚೆಗೆ ಗುತ್ತಿಗೆದಾರನಾಗಿಯೂ, ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರಂತೆ. ಸ್ಥಳಕ್ಕೆ ಕಾರವಾರ ನಗರ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿ, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.


Spread the love

Leave a Reply

Your email address will not be published. Required fields are marked *