ಕಲಘಟಗಿ ಬಳಿ “ಹುಬ್ಬಳ್ಳಿ ಹೆಣ್ಮಗಳ” ಸುಟ್ಟು ಕೊಲೆ…!
1 min readಕಲಘಟಗಿ: ಮಹಿಳೆಯೊಬ್ಬಳನ್ನ ಭೀಕರವಾಗಿ ಕೊಲೆ ಮಾಡಿರುವ ಪ್ರಕರಣವೊಂದು ತಾಲೂಕಿನ ತಂಬೂರ ಕ್ರಾಸ್ ಬಳಿಯಲ್ಲಿ ಇಂದು ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯ ಎಪಿಎಂಸಿ ಬಳಿಯ ನಿವಾಸಿಯಾಗಿದ್ದ ಮಾದೇವಿ ನೀಲಮ್ಮನವರ ಎಂಬ ಮಹಿಳೆಯೇ ಬರ್ಭರವಾಗಿ ಕೊಲೆಯಾಗಿರುವ ದುರ್ಧೈವಿಯಾಗಿದ್ದು, ಯಾರೂ ಕೊಲೆ ಮಾಡಿದ್ದಾರೆಂಬ ಬಗ್ಗೆ ತನಿಖೆ ಆರಂಭಗೊಂಡಿದೆ.
ನಿನ್ನೆಯಷ್ಟೇ ಮಾದೇವಿ ಎಂಬ ಮಹಿಳೆ ಕಾಣೆಯಾಗಿರುವ ಬಗ್ಗೆ ದೂರು ನೀಡಲಾಗಿತ್ತಾದರೂ, ಆಕೆಯನ್ನ ಕೊಲೆ ಮಾಡಿ ಸುಟ್ಟು ಹಾಕಿದ್ದು ಇಂದು ಪತ್ತೆಯಾಗಿದೆ. ಇದೀಗ ಪತ್ತೆಯಾಗಿರುವ ಶವ ಆಕೆಯದ್ದೆ ಎಂದು ಸಂಬಂಧಿಕರು ಗುರುತು ಹಿಡಿದಿರುವುದು ಗೊತ್ತಾಗಿದೆ.
ಕಲಘಟಗಿ ಠಾಣೆ ಪೊಲೀಸ್ ಇನ್ಸಪೆಕ್ಟರ್ ಶ್ರೀಶೈಲ ಕೌಜಲಗಿಯವರು, ಕೊಲೆ ಪಾತಕರ ಪತ್ತೆಗಾಗಿ ಜಾಲ ಬೀಸಿದ್ದಾರೆ.