Posts Slider

Karnataka Voice

Latest Kannada News

‘ಮಿಲ್ಟ್ರಿ’ಯಾತನಿಂದ ಯುವಕನ ಕೊಲೆ: ಬೆಚ್ಚಿಬಿದ್ದ ಕಲಘಟಗಿ

1 min read
Spread the love

ಧಾರವಾಡ: ಕೆಲವು ವರ್ಷಗಳವರೆಗೆ ಸೇನೆಯಲ್ಲಿ ಸೇವೆ ಮಾಡಿ ಮರಳಿ ಬಂದು ಗ್ರಾಮದಲ್ಲೇ ಬೀಡುಬಿಟ್ಟಿರುವ ವ್ಯಕ್ತಿಯೋರ್ವ ಮಹಿಳೆಯ ಪ್ರಚೋಚನೆಯಿಂದ ಯುವಕನನ್ನ ಕೊಲೆ ಮಾಡಿರುವ ಘಟನೆ ಕಲಘಟಗಿ ತಾಲೂಕಿನ ಕಲಕುಂಡಿ ಗ್ರಾಮದಲ್ಲಿ ನಡೆದಿದೆ.

ಮೂಲತಃ ದೇವಿಕೊಪ್ಪ ಗ್ರಾಮದ ಗಂಗಾಧರ ನಿಂಗಪ್ಪ ನೂಲ್ವಿ ಹಾಗೂ ಶಾರದಾ ಪಾಟೀಲ ಕೂಡಿಕೊಂಡು ಜಗದೀಶ ಹನಮಂತಪ್ಪ ತಾಂಬೆ ಎಂಬ ಯುವಕನನ್ನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುವ ಕಲಘಟಗಿ ಠಾಣೆ ಪೊಲೀಸರು ಆಟೋಪಿಗಳನ್ನ ಬಂಧಿಸಿದ್ದಾರೆ.

ಕೊಲೆಯಾದ ಜಗದೀಶನ ಸಹೋದರ ದೊಂಡಿಬಾ ತಾಂಬೆಯ ಮೇಲಿನ ಸಿಟ್ಟನ್ನ ತೆಗೆದುಕೊಂಡು ಗೌಂಡಿ ಕೆಲಸ ಮಾಡುತ್ತಿದ್ದ ಜಗದೀಶನ್ನ ಕೊಲೆ ಮಾಡಿದ್ದಾರೆ. ಈ ಕೊಲೆಗೆ ಮಹಿಳೆಯಾದ ಶಾರದಾ ಪಾಟೀಲಳ ಪ್ರಚೋದನೆ ಕಾರಣವೆಂದು ದೂರಿನಲ್ಲಿ ಹೇಳಲಾಗಿದೆ.

ಕೆಲವು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಬಿಟ್ಟು ಬಂದಿರುವ ಗಂಗಾಧರ ಮೊದಲಿಂದಲೂ ಹಲವು ಧಮಕಿಗಳನ್ನ ಕೊಡುತ್ತಿದ್ದನೆಂದು ಹೇಳಲಾಗಿದೆ. ಕೊಲೆಯಾದ ಯುವಕನ ಶವದ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.


Spread the love

Leave a Reply

Your email address will not be published. Required fields are marked *