Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ “ರಾತ್ರೋರಾತ್ರಿ ಹತ್ಯೆ”- ಪರಾರಿಯಾಗುತ್ತಿದ್ದವ ಅರೆಸ್ಟ್…!!!

1 min read
Spread the love

*Exclusive*

ಒಡಹುಟ್ಟಿದ್ದವನಿಂದ ಚಾಕು ಇರಿದು ತಮ್ಮನ ಕೊಲೆ; ಸ್ನಾನ ಮಾಡಿ ಎಸ್ಕೇಪ್ ಆಗುತ್ತಿದ್ದ ರಾಜು ಲಾಕ್

ಹುಬ್ಬಳ್ಳಿ: ಹುಟ್ಟುತ್ತಾ ಅಣ್ಣ-ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬ ನಾಣ್ಣುಡಿಯಂತೆ ಅಣ್ಣ-ತಮ್ಮಂದಿರ ಮನೆಯಲ್ಲಿನ ಆಂತರಿಕ ಕಲಹ ವಿಕೋಪಕ್ಕೆ ಹೋದ ಹಿನ್ನೆಲೆ ಅಣ್ಣನೊಬ್ಬ ಒಡಹುಟ್ಟಿದ್ದ ತಮ್ಮನನ್ನೇ ಚಾಕು ಇರಿದು ಭೀಕರವಾಗಿ ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ಮಂಗಳವಾರ ಮಧ್ಯರಾತ್ರಿ 1 ಗಂಟೆಗೆ ನಡೆದಿದೆ.

ಹುಬ್ಬಳ್ಳಿಯ ವಿಜಯನಗರದ ನಿವಾಸಿಯಾದ 29 ವರ್ಷದ ಪವನ ಕಟವಾಟೆ ಎಂಬಾತ ಅಟೋ ಚಾಲಕನಿಗೆ ಕೆಲಸವನ್ನು ಮಾಡಿಕೊಂಡಿದ್ದ,ಇನ್ನು ವಿಪರೀತ ಕುಡಿತದ ಚಟಕ್ಕೆ ದಾಸನಾಗಿದ್ದ ಈತ ತನ್ನ ಮನೆ ಸೇರಿದಂತೆ ವಿಜಯನಗರದಲ್ಲಿಯೂ ಕೂಡಾ ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿ ಮಾಡುತ್ತಿದ್ದ.ಹೀಗಾಗಿ ಈತನ ಕಾಟದಿಂದ ಬೇಸತ್ತ ಕುಟುಂಬದವರು ಈತನನ್ನು ಮನೆಯಿಂದ ದೂರ ಇಟ್ಟಿದ್ದರು.

ಹೀಗಾಗಿ ಪವನ ವಿಜಯನಗರದಲ್ಲಿನ ವಿಜಯ ಹೋಟೆಲ್ ಬಳಿಯಲ್ಲಿಯೇ ರೂಮ್ ಮಾಡಿಕೊಂಡು ತನ್ನ ಜೀವನ ಸಾಗಿಸುತ್ತಿದ್ದ. ಆದ್ರೆ, ಮಂಗಳವಾರ ಅಣ್ಣ ತಮ್ಮಂದಿರ ನಡುವೆ ಜಗಳ ವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ ಅಣ್ಣ ರಾಜು ಮಂಗಳವಾರ ಮಧ್ಯರಾತ್ರಿ 1 ಗಂಟೆಗೆ ಪವನ ವಾಸವಿದ್ದ ಬಾಡಿಗೆ ರೂಂಗೆ ಬಂದು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿ. ಅಲ್ಲಿಂದ ತನ್ನ ಮನೆಗೆ ತೆರಳಿ ಸ್ನಾನ ಮಾಡಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ರಾಜುನನ್ನು ಬಂದನ ಮಾಡಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಕೊಲೆಯಾದ ಸ್ಥಳಕ್ಕೆ ಅಶೋಕ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ರೂಂನಲ್ಲಿಯೇ ಬಿದ್ದಿದ್ದ ಪವನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಲು ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದ್ದು, ಕೊಲೆ ಮಾಡಿದ ಆರೋಪಿ ರಾಜುನನ್ನು ವಶಕ್ಕೇ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು ಪೊಲೀಸ್ ತನಿಖೆಯಿಂದಲೇ ಪವನ ಕೊಲೆಗೆ ನಿಖರ ಕಾರಣ ತಿಳಿದು ಬರಬೇಕಿದೆ.


Spread the love

Leave a Reply

Your email address will not be published. Required fields are marked *