Posts Slider

Karnataka Voice

Latest Kannada News

ಹುಬ್ಬಳ್ಳಿ ಕೃಷ್ಣಭವನದ ಎದುರು ಬೆಳ್ಳಂಬೆಳಿಗ್ಗೆ “ಹೆಣ್ಣು ಮಗಳ ಕೊಂದ ದೂರ್ತ”….

1 min read
Spread the love

ಹುಬ್ಬಳ್ಳಿ: ಮಡದಿಯೊಂದಿಗೆ ಮಾತನಾಡುತ್ತ ನಡೆದುಕೊಂಡು ಹೋಗುತ್ತಿದ್ದ ಆಸಾಮಿಯೋರ್ವ ಕಲ್ಲು ಹಾಗೂ ಬಾಟಲಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಕೃಷ್ಣಭವನ ಎದುರಿನ ರಸ್ತೆಯಲ್ಲಿ ಬೆಳ್ಳಂಬೆಳಿಗ್ಗೆ ನಡೆದಿದೆ.

ಕೊಲೆಯಾದ ಮಹಿಳೆ

ದಾವಣಗೆರೆ ಮೂಲದ ಸುಮಾ ಎಂಬಾಕೆಯ ಪತಿ ರಾಮಣ್ಣ ಎಂಬಾತನೇ ಕುಡಿದ ಮತ್ತಿನಲ್ಲಿ ಹೊಡೆದು ಕೊಲೆ ಮಾಡಿದ್ದಾನೆ. ಇವರಿಬ್ಬರು ಕಳೆದು ಒಂದು ವರ್ಷದಿಂದ ಹುಬ್ಬಳ್ಳಿಯಲ್ಲಿ ವಾಸವಾಗಿದ್ದರೆಂದು ಗೊತ್ತಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೇ ಶಹರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನ ವಶಕ್ಕೆ ಪಡೆದಿದ್ದು, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಕಿಮ್ಸಗೆ ರವಾನೆ ಮಾಡಿದ್ದಾರೆ.

ಬೆಳಿಗ್ಗೆ ಅಂಗಡಿ ತೆಗೆಯುವವರು ಘಟನೆಯನ್ನ ನೋಡಿ ಬೆಚ್ಚಿಬಿದ್ದು, ಕೆಲವರು ಮತ್ತೆ ಅಂಗಡಿ ಬಂದ್ ಮಾಡಿ ಹೋಗಿದ್ದಾರೆಂದು ಹೇಳಲಾಗಿದೆ.


Spread the love

Leave a Reply

Your email address will not be published. Required fields are marked *