ರುಂಡ-ಮುಂಡ ಪ್ರಕರಣ- ಪ್ರೀತಿಗಾಗಿ ನಡೆದಿತ್ತು ಕೊಲೆ- ನಾಲ್ವರ ಬಂಧನ….!
1 min readಧಾರವಾಡ: ತಂಗಿಯನ್ನ ಪ್ರೀತಿ ಮಾಡುತ್ತಿದ್ದಾನೆಂಬ ಕಾರಣಕ್ಕೆ ಗದರಿಸುತ್ತಿದ್ದ ಅಣ್ಣನನ್ನ ಗೆಳೆಯರೊಂದಿಗೆ ಸೇರಿಕೊಂಡು ಹತ್ಯೆ ಮಾಡಿದ ನಾಲ್ವರನ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಮಾಹಿತಿ ನೀಡಿದರು.
ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾಹಿತಿ ನೀಡಿದ ಕೃಷ್ಣಕಾಂತ, ಹತ್ಯೆಯಾದ ವ್ಯಕ್ತಿಯನ್ನ ರಾಕೇಶ ಕಾಟವೆ ಎಂದು ಗುರುತಿಸಲಾಗಿದೆ. ಈತನ ಸಹೋದರಿಯ ಜೊತೆ ಅಪೇರ್ ಇಟ್ಟುಕೊಂಡಿದ್ದ ನಿಯಾಜ ಅಹ್ಮದ ಸೈಪುದ್ದೀನ ಕಟಿಗಾರನೇ, ಪ್ಲಾನ್ ಮಾಡಿ ಕೊಲೆ ಮಾಡಿದ್ದಾನೆ. ಹತ್ಯೆಗೆ ಜೊತೆಗೂಡಿದ್ದ ತೌಸೀಫ ಅಬ್ದುಲರೆಹಮಾನ ಚೆನ್ನಾಪುರ, ಅಲ್ತಾಫ ತಾಜುದ್ದೀನ ಮುಲ್ಲಾ ಹಾಗೂ ಅಮನ ಅಲಿಯಾಸ್ ಮಹ್ಮದ ಉಮರ ಗಿರಣಿವಾಲೆ ಎಂಬುವವರನ್ನ ಬಂಧನ ಮಾಡಲಾಗಿದೆ.