ಶಿವಾನಂದ ಮುತ್ತಣ್ಣನವರ ತಮ್ಮನಿಂದ ತಾಯಿಯ ಕೊಲೆ ಯತ್ನ…!

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣನವರ ಸಹೋದರ ತನ್ನ ತಾಯಿಯ ಕತ್ತು ಹಿಸುಕಿ ಕೊಲೆ ಮಾಡುವ ಯತ್ನ ಮಾಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.

ಕಳೆದ ಮೂರು ದಿನದ ಪಾಲಿಕೆಯ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣನವರ ಸಹೋದರ ಮಾಜಿ ಕೆಎಸ್ಸಾರ್ಟಿ ನೌಕರ ಈಶ್ವರ ಮುತ್ತಣ್ಣನವರ, ತಮ್ಮ ತಾಯಿಯಾದ ಫಕ್ಕೀರವ್ವ ಹನಮಂತಪ್ಪ ಮುತ್ತಣ್ಣನವರರನ್ನ ಕತ್ತು ಹಿಸುಕಿ ಕೊಲೆ ಮಾಡಲು ಮುಂದಾಗಿದ್ದನೆಂದು ಶಿವಾನಂದ ಮುತ್ತಣ್ಣನವರ, ಬೆಂಡಿಗೇರಿ ಪೊಲೀಸ್ ಪ್ರಕರಣ ದಾಖಲು ಮಾಡಿದ್ದಾರೆ.

ಹುಬ್ಬಳ್ಳಿಯ ವೀರಾಪುರ ಓಣಿಯ ಮಹಾಬಳೇಶ್ವರ ದೇವಸ್ಥಾನದ ಬಳಿಯ ಮನೆಯಲ್ಲಿಯೇ ಕೃತ್ಯ ನಡೆದಿದ್ದು, ತೀವ್ರವಾಗಿ ಅಸ್ವಸ್ಥಗೊಂಡ ಫಕ್ಕೀರವ್ವ ಮುತ್ತಣ್ಣನವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಣಕಾಸಿ ವ್ಯವಹಾರದಲ್ಲಿ ಕುಗ್ಗಿ ಹೋಗಿರುವ ಈಶ್ವರ ಮುತ್ತಣ್ಣನವರ, ಹಣಕ್ಕಾಗಿಯೇ ಹೀಗೆ ಮಾಡಿದ್ದಾನೆಂದು ಹೇಳಲಾಗಿದೆ. ಪ್ರಕರಣ ದಾಖಲು ಮಾಡಿರುವ ಹಿನ್ನೆಲೆಯಲ್ಲಿ ಈಶ್ವರ ನಾಪತ್ತೆಯಾಗಿದ್ದು, ಬೆಂಡಿಗೇರಿ ಠಾಣೆಯ ಪೊಲೀಸರು ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದಾರೆ.