100% EXCLUSIVE ಪ್ರೂಟ್ ಹತ್ಯೆ- ಬುಲೆಟ್-ಡಿಯೋ-ಯಾಕ್ಟಿವಾ-ಜೈಲೋ ವಾಹನ ಸಮೇತ ಐವರು ಅಂದರ್- 7ಲಕ್ಷಕ್ಕೆ ಗುಂಡು- ಮೂರು ಲಕ್ಷಕ್ಕೆ ದಾರಿ
1 min readಹುಬ್ಬಳ್ಳಿ: ಹಾಡುಹಗಲೇ ಗುಂಡಿನ ಸುರಿಮಳೆಗೈದು ಹತ್ಯೆಯಾಗಿದ್ದ ಪ್ರೂಟ್ ಇರ್ಫಾನ್ ಕೊಲೆ ಪ್ರಕರಣವನ್ನೂ ಕೊನೆಗೂ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಭೇದಿಸಿದ್ದು, ಐವರನ್ನ ಕಾರಾಗೃಹದೊಳಗೆ ಕಳಿಸಿದ್ದಾರೆ.
ಕಳೆದ ವಾರದ ಹಿಂದೆ ತನ್ನ ಮಗನ ವಲೀಮಾ ಮುಗಿಸಿ ಬೀಗರನ್ನ ಕಳಿಸುತ್ತಿದ್ದಾಗಲೇ ಬುಲೆಟ್ ಮತ್ತು ಡಿಯೋದಲ್ಲಿ ಬಂದಿದ್ದ ಹಂತಕರು ಪ್ರೂಟ್ ಇರ್ಫಾನ್ ಅಲಿಯಾಸ್ ಇರ್ಫಾನ ಹಂಚಿನಾಳ ಅಲಿಯಾಸ್ ಸೈಯ್ಯದ ಇರ್ಫಾನ್ ಮೇಲೆ ಗುಂಡು ಹೊಡೆದು ಪರಾರಿಯಾಗಿದ್ದರು.
ಸತತ ಪ್ರಯತ್ನದ ನಂತರ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಬುಲೆಟ್ ಚಲಾಯಿಸಿದ ಅಪ್ತಾಬ್, ಡಿಯೋ ಚಲಾಯಿಸಿದ ತೌಸೀಫ್, ಝೈಲೋ ಚಾಲಕನಾಗಿದ್ದ ಅಮೀರ ತಮಟಾಗಾರ, ಸ್ಥಳೀಯರಿಗೆ ಹಣ ನೀಡಿದ ಮೊಮೀನ್ ಹಾಗೂ ಇನ್ನೋಬ್ಬನನ್ನ ಬಂಧಿಸಿದ್ದಾರೆ.
ಪೊಲೀಸರ ತನಿಖೆಯ ಪ್ರಕಾರ ಸ್ಥಳೀಯವಾಗಿ ಸಹಾಯ ಮಾಡುವಅಪ್ತಾಬ್ ಬೇಪಾರಿ ಮತ್ತು ತಂಡಕ್ಕೆ ಮೂರು ಲಕ್ಷ ರೂಪಾಯಿಗಳನ್ನ ನೀಡಿದ್ದು, ಬಾಂಬೆಯಿಂದ ಬಂದ ತಂಡಕ್ಕೆ ಏಳು ಲಕ್ಷ ರೂಪಾಯಿಗಳನ್ನ ಮೊಮೀನ್ ನೀಡಿದ್ದನೆಂದು ಗೊತ್ತಾಗಿದೆ.
ಪ್ರೂಟ್ ಇರ್ಫಾನ್ ಹತ್ಯೆಗೆ ಸುಪಾರಿ ನೀಡಿದ್ದು ಯಾರೂ ಎಂಬುದನ್ನ ಪೊಲೀಸರ ಬಹಿರಂಗ ಮಾಡಬೇಕಿದ್ದು, ಗುಂಡು ಹೊಡೆದವರು ಮಾತ್ರ ಬಾಂಬೆ ಮೂಲದವರೇ ಎಂದು ತನಿಖೆಯಲ್ಲಿ ಗೊತ್ತಾಗಿದೆಯಂತೆ.
ಅವಳಿ ನಗರದಲ್ಲಿ ಹಾಡುಹಗಲೇ ಇರ್ಫಾನ ಕೊಲೆ ನಡೆದ ಒಂದು ವಾರದ ನಂತರ ಹತ್ಯೆಗೆ ಸಂಬಂಧಿಸಿದ ಮೂಲ ವ್ಯಕ್ತಿಗಳನ್ನ ಬಂಧಿಸಬೇಕಾಗಿದ್ದು, ಬಂಧನವಾಗಿರುವವರ ಬಳಿಯಿದ್ದ ಕೆಲವು ಜೀವಂತ ಗುಂಡುಗಳನ್ನೂ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿಯಿದೆ.