Posts Slider

Karnataka Voice

Latest Kannada News

ಧಾರವಾಡದ ಸಾಯಿ ಖಾನಾವಳಿ ಮಾಲೀಕನ “ಎದೆಗೆ ಡಿಚ್ಚಿ” ಸ್ಥಳದಲ್ಲಿ ಸಾವು…!!!

Spread the love

ಧಾರವಾಡ: ಅವರದ್ದೆ ವ್ಯವಹಾರಿಕ ಜಗಳದಲ್ಲಿ ಮೂಗು ತೂರಿಸಿ ಖಾನಾವಳಿ ಮಾಲೀಕನ ಮೇಲೆ ಮೂವರು ಹಲ್ಲೆ ಮಾಡಿದ ಸಮಯದಲ್ಲಿಯೇ ಮಾಲೀಕನ ಪ್ರಾಣ ಹೋಗಿರುವ ಘಟನೆ ಧಾರವಾಡದ ಹೊಸ ಬಸ್ ನಿಲ್ದಾಣದ ಮುಂಭಾಗದಲ್ಲಿನ ಸಾಯಿ ಖಾನಾವಳಿಯಲ್ಲಿ ನಡೆದಿದೆ.

ಖಾನಾವಳಿ ಮಾಲೀಕ ರಾಮಲಿಂಗಪ್ಪ ಮಲ್ಲಪ್ಪ ಗುಂಜಾಳ ಎಂಬ 69 ವರ್ಷದ ವ್ಯಕ್ತಿಯೇ ದುರ್ಮರಣಕ್ಕೀಡಾಗಿದ್ದಾನೆ.

ಮೃತ ರಾಮಲಿಂಗಪ್ಪ

ಘಟನೆಯ ವಿವರ: ಸಾಯಿ ಹೊಟೇಲ್ ಮತ್ತು ಸಾಯಿ ಖಾನಾವಳಿ ಮಾಲೀಕ ರಾಮಲಿಂಗಪ್ಪ, ದಾಯಾದಿಗಳೊಂದಿಗೆ ಜಗಳ ಮಾಡುತ್ತಿದ್ದಾಗ, ಹೊಟೇಲ್‌ಗೆ ಬಂದ ಗ್ರಾಹಕರು ಮಾಲೀಕನೊಂದಿಗೆ ವಾಗ್ವಾದ ನಡೆಸಿದ್ದಾರೆ. ಇದಾದ ಕೆಲವೊತ್ತಿನ ನಂತರ ಹೊರಗೆ ಹೋಗಿದ್ದ ಮೂವರು ಗ್ರಾಹಕರು ಎಗ್‌ರೈಸ್ ತಿಂದು ಬಂದು ಮತ್ತೆ ರಾಮಲಿಂಗಪ್ಪನ ಜೊತೆ ಕಾದಾಟಕ್ಕೀಳಿದಿದ್ದಾರೆ. ಈ ಸಮಯದಲ್ಲಿ ಎದೆಗೆ ಗುದ್ದಿದ್ದರಿಂದ ಅಲ್ಲಿಯೇ ಕುಸಿದು ರಾಮಲಿಂಗಪ್ಪ ಸಾವಿಗೀಡಾಗಿದ್ದಾನೆ.

ಪ್ರಕರಣವನ್ನ ತಿರುಚಲು ಕೆಲವರು ಮುಂದಾಗಿದ್ದು, ಅವರು ಹೊಡೆದಿರುವುದಕ್ಕೆ ರಾಮಲಿಂಗಪ್ಪ ಸತ್ತಿಲ್ಲ, ಬದಲಿಗೆ ಹೃದಯಾಘಾತದಿಂದ ಸಾವಿಗೀಡಾಗಿದ್ದಾನೆಂದು ಹೇಳಿಸುವ ಪ್ರಯತ್ನ ಆರಂಭಗೊಂಡಿದೆ.

ಗ್ರಾಹಕರ ಸೋಗಿನಲ್ಲಿದ್ದ ಕಿರಾತಕರು ಮಾಡಿದ ಹಲ್ಲೆಯಿಂದಲೇ ಆತನ ಸಾವಾಗಿದೆ ಎಂಬುದು ಇನ್ನೂ ನಿಖರಗೊಳ್ಳಬೇಕಿದೆ. ಪ್ರಕರಣದ ಬಗ್ಗೆ ಉಪನಗರ ಠಾಣೆ ಪೊಲೀಸರು ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *