Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ “ಹಿಂದು ಯುವತಿಯ” ಮನೆಗೆ ನುಗ್ಗಿ ಇರಿದಿರಿದು ಹತ್ಯೆ ಮಾಡಿದ ವಿಶ್ವನಾಥ…!!!

1 min read
Spread the love

ಹುಬ್ಬಳ್ಳಿ: ಸ್ನೇಹಾ ಹಿರೇಮಠ ಕೊಲೆಯಿಂದ ಇಡೀ ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದ ಹುಬ್ಬಳ್ಳಿಯಲ್ಲಿ ಮತ್ತೇ ನೆತ್ತರು ಹರಿದಿದ್ದು, ತಾನು ಪ್ರೀತಿಸಿದ ಯುವತಿಯನ್ನೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ ಘಟನೆ ಬುಧವಾರ ಹುಬ್ಬಳ್ಳಿಯಲ್ಲಿ ನಡೆದಿದೆ.

Exclusive videos..

ವೀರಾಪುರ ಓಣಿಯ 22 ವರ್ಷದ ಅಂಜಲಿ ಅಂಬಿಗೇರ ಎಂಬ ಯುವತಿಯೇ ಕೊಲೆಯಾಗಿದ್ದು, ಆರೋಪಿ ಈಕೆಯ ಪ್ರಿಯತಮ ವಿಶ್ವನಾಥ ಸಾವಂತ ಎಂದು ತಿಳಿದು ಬಂದಿದೆ. ಕಳೆದ 1 ವರ್ಷದಿಂದ ಇಬ್ಬರು ಕೂಡಾ ಪರಸ್ಪರ ಪ್ರೀತಿಯನ್ನು ಮಾಡುತ್ತಿದ್ದರು. ಆದ್ರೆ, ಕಳೆದ ಒಂದು ವಾರದಿಂದ ಇಬ್ಬರ ನಡುವೆ ಕೆಲವು ವೈಯಕ್ತಿಕ ವಿಚಾರಕ್ಕೆ ಭಿನ್ನಾಭಿಪ್ರಾಯ ಬಂದಿತ್ತು ಎನ್ನಲಾಗುತ್ತಿದೆ.

ಹೀಗಾಗಿ ಇಂದು ಬೆಳಗಿನ ಜಾವ ವಿಶ್ವನಾಥ, ಅಂಜಲಿ ವಾಸವಿದ್ದ ಮನೆಗೆ ಬಂದವನ್ನೇ ಮಲಗಿದ್ದ ಅಂಜಲಿ ಕುತ್ತಿಗೆ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ SP ಬ್ಯಾಕೋಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳೆದ ಹಲವು ದಿನಗಳಿಂದ ಹುಬ್ಬಳ್ಳಿಯಲ್ಲಿ ಕ್ರೈಂ ರೇಟ್ ಹೆಚ್ಚಳವಾಗುತ್ತಿದ್ದು ಅದರಲ್ಲೂ ಪ್ರೀತಿಗಾಗಿ ಯುವತಿಯರ ಕೊಲೆ ಆಗುತ್ತಿರೋದು ಹುಬ್ಬಳ್ಳಿಯ ಜನತೆಯನ್ನು ಆತಂಕಕ್ಕೀಡು ಮಾಡಿದ್ದಂತೂ ಸುಳ್ಳಲ್ಲ.


Spread the love

Leave a Reply

Your email address will not be published. Required fields are marked *