“ಪ್ಯಾಸಾ ಬದನ್”-ಗೋವನಕೊಪ್ಪದ ಬಳಿಯ ಮಹಿಳೆಯ ಕೊಲೆಗಾರ ಪತ್ತೆ…

ಧಾರವಾಡ: ತಾಲೂಕಿನ ಗೋವನಕೊಪ್ಪದ ಬಳಿ ಮಹಿಳೆಯನ್ನ ಹತ್ಯೆ ಮಾಡಿದ್ದ ಆರೋಪಿಯನ್ನ ಹೆಡಮುರಿಗೆ ಕಟ್ಟುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಕೊಲೆಗೆ ‘ಸ್ಪಂದನೆ’ ಸಿಗದೇ ಇರುವುದು ಕಾರಣವೆಂದು ಗೊತ್ತಾಗಿದೆ.
ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಅವರು ಮಾತನಾಡಿದ್ದು ಇಲ್ಲಿದೆ ಕೇಳಿ..
ಧಾರವಾಡ ಕೊಂಡಿವಾಡ ಓಣಿಯ ರೂಪಾ ಲಕ್ಷ್ಮಣ ಸವದತ್ತಿ ಎಂಬ ಮಹಿಳೆಯನ್ನ ಧಾರವಾಡ ಎಂಆರ್ ನಗರದ ರಾಕೇಶ ಎಂಬಾತನೇ ಕೊಲೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದು, ಕೊಲೆಗಾರ ಹತ್ಯೆ ನಡೆದ ನಂತರ ಶವದ ಬಳಿ ನಿಂತೆ ಮಾದ್ಯಮದವರಿಗೆ ಹೇಳಿಕೆ ನೀಡಿದ್ದ. ಅಷ್ಟೇ ಅಲ್ಲ, ಪೊಲೀಸರಿಗೆ ಬೇರೆಯದ್ದೆ ಕಥೆ ಹೇಳಿದ್ದ ಎಂಬುದು ಕೂಡಾ ಗೊತ್ತಾಗಿದೆ.