Posts Slider

Karnataka Voice

Latest Kannada News

ತಮ್ಮನ ಗೆಲುವಿಗೆ ಅಣ್ಣನ ಹತ್ಯೆ: ಗ್ರಾಪಂ ಚುನಾವಣೆ “ರೈವಲರ್ರಿ”

1 min read
Spread the love

ಬೆಳಗಾವಿ: ಗ್ರಾಂ ಪಂ ಚುನಾವಣೆ ಅಂದ್ರೆನೇ ಹಾಗೆ ಒಂದೇ ಊರಿನಲ್ಲಿ ಆಟ ಆಡಿ ಬೆಳೆದ ಸಹೋದರರು ಎದುರಾಳಿಗಳಾಗ್ತಾರೆ. ಹೆಣ್ಣು ಕೊಟ್ಟು ಪಡೆದ ಮಾವ ಅಳಿಯಂದಿರು ಪರಸ್ಪರ ಕೈ ತೊಡೆ ತಟ್ತಾರೆ. ಹಾಗಾಗಿಯೇ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಎಲೆಕ್ಷನ್ ಕಾವು ಜೋರಾಗೆ ಇತ್ತು.


ಗ್ರಾಮದಲ್ಲಿ ಬಶೀರ್ ಮುಲ್ಲಾ ಪ್ಯಾನಲ್ 10 ಸ್ಥಾನ ಗೆದ್ದಿದ್ದು, ಈ ಹಿಂದೆ ಗೆಲ್ಲುತ್ತ ಬಂದಿದ್ದ ಶಬ್ಬೀರ ಮುಲ್ಲಾ ಪ್ಯಾನಲ್ ಠೇವಣಿ ಕಳೆದುಕೊಂಡಿತ್ತು.. ಹೀಗಾಗಿ ವಿಜಯೋತ್ಸವ ನಡೆಸುತ್ತಿದ್ದ ಬಶೀರ ಮನೆಯವರ ಮೇಲೆ ಶಬ್ಬೀರ ಮುಲ್ಲಾ ಕುಟುಂಬದವರು ಕಾಲ್ಕೆರೆದು ಜಗಳ ಮಾಡೋಕೆ ಬಂದಿದ್ದಾರೆ ಜಗಳ ಮಾತಿಗಷ್ಟೆ ಸೀಮಿತವಾಗದೆ ಕೈಲಿ ಕೋಲು, ರಾಡ್, ಹರಿತವಾದ ಕತ್ತಿ ಹಿಡಿಯುವರೆಗೆ ಬಂದು ಬಿಟ್ಟಿದೆ.


ಈ ಘಟನೆಯಲ್ಲಿ ಗೆದ್ದ ಅಭ್ಯರ್ಥಿ ಬಶೀರ್ ಮುಲ್ಲಾ ಸಹೋದರ ಶಾನೂರ ಮುಲ್ಲಾ ಕೊಲೆಯಾಗಿ ಹೋಗಿದ್ದಾರೆ. ಸುಲ್ತಾನಪುರ ಗ್ರಾಮದಲ್ಲಿ ಕಳೆದ 10 ವರ್ಷಗಳಿಂದ ಕೇವಲ ಶಬ್ಬೀರ ಅವರ ಪ್ಯಾನಲ್ ಗೆದ್ದು ಬರ್ತಿತ್ತು‌. ಗೆದ್ದು ಬಂದ ಮೇಲೆ ಗ್ರಾಮದಲ್ಲಿ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ, ಈ ಬಾರಿ ಬಶೀರ್ ಅವರ ಪ್ಯಾನಲ್ ಎಲೆಕ್ಷನ್ ಗೆ ನಿಂತು ಬರೊಬ್ಬರಿ 10 ಸ್ಥಾನ ಗೆಲ್ಲೊದ್ರಲ್ಲಿ ಯಶಸ್ವಿಯಾಗಿತ್ತು. ಅಲ್ಲೆ ಯಾರು ಸೋಲ್ತಾರೆ ಯಾರು ಗೆಲ್ತಾರೆ ಎಂಬ ಬಗ್ಗೆ ಬೆಟ್ಟಿಂಗ್ ಸಹ ಊರೊಳಗೆ ಶುರುವಾಗಿದ್ವು. ನಿನ್ನೆ ಗೆದ್ದ ನಂತರ ಬಶೀರ್ ಟೀಂನವರು ಪಕ್ಕದ ಗ್ರಾಮ ಬಸಾಪುರಕ್ಕೆ ಹೋಗಿ ಸಂಬಂಧಿಕರಿಗೆ ಸ್ವೀಟ್ ನೀಡಿ ಬಂದಿದ್ದಾರೆ. ಇವರು ಸ್ವೀಟ್ ನೀಡಿ ಬಂದ ವಿಷಯ ಸೋತ ಶಬ್ಬೀರ ಮನೆಯವರಿಗೆ ತಿಳಿದಿದ್ದೆ ತಡ, ಏಕಾಏಕಿ ಬಶೀರ ಮನೆ ಮುಂದೆ ಬಂದು ಶಬ್ಬೀರ ಬೆಂಬಲಿಗರು ದಾಂಧಲೇ ಶುರುಮಾಡಿದ್ದಾರೆ. ಇವರಿಗೆ ಬುದ್ದಿ ಹೇಳಿ ಕಳಿಸೋಕೆ ಮನೆಯಿಂದ ಹೊರಬಂದ ಶಾನೂರ ಅವರನ್ನ ಎಳೆದ ಶಬ್ಬೀರ ಮನೆಯರು ಏಕಾಏಕಿ ಶಾನೂರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡೋಕೆ ಶುರು ಮಾಡಿದ್ದಾರೆ. ಘಟನೆಯಲ್ಲಿ ಆತ ಹತ್ಯೆಯಾಗಿದ್ದಾನೆ.
ಪ್ರಕರಣಕ್ಕೆ ಸಂಬಧಪಟ್ಟಂತೆ ಹುಕ್ಕೇರಿ ಪೊಲೀಸರು 6 ಜನರನ್ನು ಬಂಧಿಸಿದ್ದು ಜಹಾಂಗೀರ ಮುಲ್ಲಾ, ಸುಲ್ತಾನಸಾಬ ಮುಲ್ಲಾ, ಹಸನಸಾಬ್ ಮುಲ್ಲಾ, ದಸ್ತಗೀರ ಮುಲ್ಲಾ, ತೌಸಿಪ್ ಮುಲ್ಲಾ, ಮೋಸಿನ್ ಖಾಜಿ ಎಂಬ 6 ಜನರನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *