Posts Slider

Karnataka Voice

Latest Kannada News

“ವಿದ್ಯಾಗಿರಿ ಲಿಮಿಟ್ಸ್” 4ದಿನದಲ್ಲಿ “ಮೂರು ಕೊಲೆ”- ನವಲೂರಲ್ಲಿಂದು ಮಹಿಳೆಯ ಹತ್ಯೆ…!!!

1 min read
Spread the love

ಧಾರವಾಡ: ಕಳೆದ ನಾಲ್ಕು ದಿನದಲ್ಲಿ ಮೂರು ಹತ್ಯೆಗಳು ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಕಳೆದ ನಾಲ್ಕು ದಿನದ ಯುವಕನ ಮೇಲೆ ಹಲ್ಲೆ ನಡೆದಿತ್ತು, ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ. ಮೊನ್ನೆ ರಾತ್ರಿ ಇಬ್ಬರ ಮೇಲೆ ಹಲ್ಲೆ ನಡೆದಾಗ ಕಲ್ಲನಗೌಡ ಎಂಬಾತ ಸಾವಿಗೀಡಾಗಿದ್ದ.

ಈ ಎರಡು ಘಟನೆಗಳ ಬಗ್ಗೆ ಕಾನೂನು ಕ್ರಮ ಜರುಗಿಸುತ್ತಿದ್ದ ಸಮಯದಲ್ಲಿ ನವಲೂರ ಗ್ರಾಮದ ವಿಠ್ಠಲ ದೇವಸ್ಥಾನದ ಪಕ್ಕದಲ್ಲಿ ಮಹಿಳೆಯನ್ನ ಕಂದಲಿಯಿಂದ ಹೊಡೆದು ಹತ್ಯೆ ಮಾಡಲಾಗಿದೆ.

ಹತ್ಯೆಗೀಡಾದ ಮಹಿಳೆಯನ್ನ ಕರೆವ್ವ ಯಲ್ಲಪ್ಪ ಇರಬಗೇರಿ ಎಂದು ಗುರುತಿಸಲಾಗಿದ್ದು, ಹತ್ಯೆಯ ಹಿಂದಿನ ಸತ್ಯ ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.


Spread the love

Leave a Reply

Your email address will not be published. Required fields are marked *