ಹತ್ಯೆಯಾದ ದೇವಪ್ಪಜ್ಜನ ಅಂತ್ಯಕ್ರಿಯೆ, ನಾಳೆ ಕುಸುಗಲ್ನಲ್ಲಿ- ವಿದೇಶದಲ್ಲಿರೋ ಮಗನ ಆಗಮನ ಸಾಧ್ಯತೆ…

ಹುಬ್ಬಳ್ಳಿ: ನಿನ್ನೆ ಇಳಿಸಂಜೆಯ ಹೊತ್ತಿನಲ್ಲಿ ಆಗುಂತಕನಿಂದ ಹತ್ಯೆಗೊಳಗಾದ ದೇವೆಂದ್ರಪ್ಪ (ದೇವಪ್ಪಜ್ಜ) ಮ. ವನಹಳ್ಳಿ ಅವರ ಅಂತ್ಯಕ್ರಿಯೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ರುದ್ರಭೂಮಿಯಲ್ಲಿ ನಡೆಯಲಿದೆ.
ಬೆಳಿಗ್ಗೆ ವಿದ್ಯಾನಗರದ ಮನೆಯಲ್ಲಿಟ್ಟು ತದನಂತರ ಒಂಬತ್ತು ಗಂಟೆಯ ನಂತರ ಕುಸುಗಲ್ ಗ್ರಾಮದ ಶ್ರೀ ಕಾಳಿಕಾದೇವಿ ಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 12 ಗಂಟೆಗೆ ಕುಸುಗಲ್ ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿರುವ ಬಗ್ಗೆ ವಿವರ ಹೊರಬಿದ್ದಿದೆ. ದೇವಪ್ಪಜ್ಜನವರ ಪುತ್ರ ವಿದೇಶದಲ್ಲಿದ್ದು, ಆತ ಬರುವ ನಿರೀಕ್ಷೆಯಿದೆ.