Posts Slider

Karnataka Voice

Latest Kannada News

ದೇವರಗುಡಿಹಾಳ ಗುಡ್ಡದಲ್ಲಿ ಯುವಕನ ‘ರುಂಡ ಚೆಂಡಾಡಿದ’ ಕಿರಾತಕರು…!

1 min read
Spread the love

ಹುಬ್ಬಳ್ಳಿ: ತಾಲೂಕಿನ ದೇವರ ಗುಡಿಹಾಳ ಹೊರವಲಯದ ಗುಡ್ಡವೊಂದರಲ್ಲಿ ಯುವಕನೋರ್ವನ ರುಂಡವನ್ನ ಚೆಂಡಾಡಿದ ಘಟನೆಯೊಂದು ಬೆಳಕಿಗೆ ಬಂದಿದ್ದು, ಮುಂಡವನ್ನ ಪತ್ತೆ ಹಚ್ಚಲು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ದೇವರಗುಡಿಹಾಳ ಗ್ರಾಮದ ಹೊರವಲಯದಲ್ಲಿರುವ ಪ್ರದೇಶದಲ್ಲಿ ಸುಮಾರು 20 ರಿಂದ 22 ವಯಸ್ಸಿನ ಯುವಕನ ರುಂಡ ಪತ್ತೆಯಾಗಿದ್ದು, ಅದಕ್ಕೂ ಹುಳುಗಳು ಆವರಿಸಿಕೊಂಡಿವೆ. ದನಕರುಗಳೊಂದಿಗೆ ಹೋದವರು ಇದನ್ನ ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಸಮೇತ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಯುವಕನನ್ನ ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆಂಬುದಾಗಲಿ, ಅಮಾನುಷವಾಗಿ ಕೊಲೆಯಾಗಿರುವ ಯುವಕನ ಬಗ್ಗೆ ಮಾಹಿತಿಯಾಗಲಿ ಸಿಗದೇ ಇರುವುದು ಮತ್ತಷ್ಟು ಗೊಂದಲವನ್ನ ಸೃಷ್ಟಿ ಮಾಡಿದೆ.

ರುಂಡ ಬಿದ್ದ ಕೆಳಭಾಗದಲ್ಲಿ ಕೆಸರು ಹೆಚ್ಚಾಗಿದ್ದರಿಂದ ಅಲ್ಲಿಗೆ ಹೋಗಲು ಕೂಡಾ ಆಗದ ಸ್ಥಿತಿಯಿದೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ರಮೇಶ ಗೋಕಾಕ ಸಮೇತ, ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಕೊಲೆಯ ಕುರುಹಿನ ಬಗ್ಗೆ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *