Posts Slider

Karnataka Voice

Latest Kannada News

ATM ಸೆಕ್ಯೂರಿಟಿ ಹತ್ಯೆ ಪ್ರಕರಣ-  ಆಗುಂತಕರ ಒಳನುಗ್ಗಿದ್ದು ಹೇಗೆ..! ಸಿಸಿಟಿವಿ ವಿಡಿಯೋ ಲಭ್ಯ

1 min read
Spread the love

ವಿಜಯಪುರ: ATM ಸೆಕ್ಯೂರಿಟಿಯ ಬರ್ಭರ ಹತ್ಯೆಗೈದು ಹಣ ಲೂಟಿಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ICICI ಬ್ಯಾಂಕ್ ನ ATMನಲ್ಲಿ ನಿನ್ನೆ ನಡೆದಿತ್ತು. ಈ ಘಟನೆಯ ಮಹತ್ವದ ಸುಳಿವು ದೊರೆತಿದೆ.

ಇನ್ನು ಐಸಿಐಸಿಐ ಬ್ಯಾಂಕ್ ATMಗೆ ದುಷ್ಕರ್ಮಿಗಳಿಬ್ಬರು ಒಳಹೋಗುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆಗುಂತಕರು ಮುಖಕ್ಕೆ ಕರ್ಚಿಪ್ಪು ಹಾಗೂ ಬ್ಲ್ಯಾಕ್ ಪ್ಯಾಂಟ್ ಆ್ಮಂಡ್ ಬ್ಲ್ಯಾಕ್ ಶರ್ಟ್ ಹಾಕಿಕೊಂಡು ಒಳನುಗ್ಗುವ ದೃಶ್ಯ ಲಭ್ಯವಾಗಿದೆ‌.

ಇನ್ನು ATM ಸೆಕ್ಯೂರಿಟಿ ಹಾಗೂ ಮದಬಾವಿ ತಾಂಡಾ ನಿವಾಸಿ ರಾಹುಲ ರಾಠೋಡ (25) ನ್ನು ಓರ್ವ ದುಷ್ಕರ್ಮಿ ಹತ್ಯೆಗೈದ್ರೇ, ಇನ್ನೊಬ್ಬ ಹಣ ಲೂಟಿಗೆ ಯತ್ನಿಸಿ ಪರಾರಿಯಾಗಿದ್ದಾರೆ.

ಇನ್ನು ಸಿಸಿಟಿವಿಯಲ್ಲಿ ಸೆರೆಯಾಗಿರುವ ವೀಡಿಯೋ ಆಧರಿಸಿ ಸಿಂದಗಿ ಠಾಣೆ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *