Posts Slider

Karnataka Voice

Latest Kannada News

ಅಪ್ಪ-ಮಗನ ಜಗಳ: ಬಿಡಿಸಲು ಹೋದ ‘ಹೆತ್ತವ್ವ’ಳನ್ನ ಬಡಿಗೆಯಿಂದ ಹೊಡೆದು ಹತ್ಯೆ…

1 min read
Spread the love

ಅಣ್ಣಿಗೇರಿ: ತಂದೆ ಗಳಿಸಿದ ಆಸ್ತಿಯಲ್ಲೇ ಮತ್ತಷ್ಟು ಆಸ್ತಿಯನ್ನ ತನ್ನ ಹೆಸರಿಗೆ ಹಚ್ಚುವಂತೆ ತಂದೆಯೊಂದಿಗೆ ಜಗಳಕ್ಕೀಳಿದ ಮಗನನ್ನ ಬಿಡಿಸಲು ಹೋದ ತಾಯಿಯೇ ಜನ್ಮ ನೀಡಿದ ಮಗನಿಂದಲೇ ಹತ್ಯೆಯಾದ ಘಟನೆ ಬೆನ್ನೂರು ಗ್ರಾಮದಲ್ಲಿ ನಡೆದಿದೆ.

ಕೊಲೆಪಾತಕ ಮಗ

ಬೆನ್ನೂರ ಗ್ರಾಮದ ಬಸವರಾಜ ಕಲ್ಲಪ್ಪ ಅಣ್ಣಿಗೇರಿ ಎಂಬ 45 ವರ್ಷದ ವ್ಯಕ್ತಿಯೇ ತನ್ನ ತಾಯಿ ಶಾಂತವ್ವಳನ್ನ ಬಡಿಗೆಯಿಂದ ಹಿಗ್ಗಾ ಮುಗ್ಗಾ ಥಳಿಸಿ ಕೊಲೆ ಮಾಡಿದ್ದಾನೆ. ಘಟನೆಯಲ್ಲಿ ತಂದೆ ಕಲ್ಲಪ್ಪನಿಗೂ ಗಾಯಗಳಾಗಿವೆ.

ಕಲ್ಲಪ್ಪ ಈಗಾಗಲೇ ಬಸವರಾಜನಿಗೆ ಎರಡೂವರೆ ಎಕರೆ ಜಮೀನು ಹೆಸರಿಗೆ ಹಚ್ಚಿದ್ದರು. ಆದರೂ, ಬಸವರಾಜ ಇನ್ನೂ ಬೇಕು ಎಂದು ತಗಾದೆ ತೆಗೆದಿದ್ದ. ಈ ಬಗ್ಗೆ ಸಾಕಷ್ಟು ಬಾರಿ ಹೇಳಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಘಟನೆಗೆ ಸಂಬಂಧಿಸಿದಂತೆ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕಾನೂನು ಕ್ರಮವನ್ನ ಜರುಗಿಸಲಾಗಿದೆ.


Spread the love

Leave a Reply

Your email address will not be published. Required fields are marked *