“ತ್ರಿಬಲ್ ಮರ್ಡರ್” ಹುಬ್ಬಳ್ಳಿಯ ಅರಳಿಕಟ್ಟಿಯಲ್ಲಿ ಆರೋಪಿ ಸೆರೆ…!

ಅಣ್ಣನ ಮಡದಿ, ಮಕ್ಕಳನ್ನು ಹತ್ಯೆಗೈದು ಪರಾರಿಯಾಗಿದ್ದ
ಬೀಗರ ಮನೆಯ ಮಾಹಿತಿ ಲಭ್ಯ
ಹಾವೇರಿ: ಒಡಹುಟ್ಟಿದ ಅಣ್ಣನ ಮಡದಿ ಹಾಗೂ ಇಬ್ಬರು ಮಕ್ಕಳನ್ನ ಹತ್ಯೆಗೈದು ಪರಾರಿಯಾಗಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಾನಗಲ್ ತಾಲೂಕಿನ ಯಳ್ಳೂರ ಗ್ರಾಮದಲ್ಲಿ ಅತ್ತಿಗೆ ಗೀತಾ ಹಾಗೂ ಮಕ್ಕಳಾದ ಅಕುಲ, ಅಂಕಿತಾ ಎಂಬುವವರನ್ನ ಕೊಲೆ ಮಾಡಿ ಕುಮಾರಗೌಡ ಪರಾರಿಯಾಗಿದ್ದ. ಪ್ರಕರಣ ದಾಖಲು ಮಾಡಿಕೊಂಡು ಹುಡುಕಾಟ ಆರಂಭಿಸಿದ ಪೊಲೀಸರು ಆರೋಪಿಯನ್ನ ಬಂಧನ ಮಾಡಿದ್ದಾರೆ.
ಆರೋಪಿ ಕುಮಾರಗೌಡ ಮರಿಗೌಡ್ರ ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ, ಕುಮಾರಗೌಡನನ್ನ ಸೆರೆ ಹಿಡಿದಿದ್ದಾರೆ.