Posts Slider

Karnataka Voice

Latest Kannada News

ಹೆಂಡತಿ ಕಳಿಸದ “ಮಾವನ ಹತ್ಯೆ”- ಅಳಿಯ ಆತ್ಮಹತ್ಯೆ…!

1 min read
Spread the love

ಹೆಂಡತಿಯನ್ನ ಕಳಿಸಿಕೊಡದ ಹಿನ್ನೆಲೆ

ಕಲ್ಲು ಎತ್ತಿ ಹಾಕಿ ಹತ್ಯೆ

ಕಲಬುರಗಿ: ತವರು ಮನೆಯಲ್ಲಿ ಉಳಿದುಕೊಂಡಿದ್ದ ಮಡದಿಯನ್ನ ಜೊತೆಗೆ ಕಳಿಸಲಿಲ್ಲವೆಂದು ಕೋಪಗೊಂಡ ಅಳಿಯ, ಮಾವನನ್ನ ಹತ್ಯೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಿಂತಪಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಈರಪ್ಪ ಕೋಡ್ಲಿ (60) ಅಳಿಯನಿಂದಲೇ ಕೊಲೆಯಾದ ನತದೃಷ್ಟ ಮಾವನಾಗಿದ್ದಾನೆ. ತವರಿನಲ್ಲಿದ್ದ ಹೆಂಡತಿಯನ್ನು ಕಳುಹಿಸಿಕೊಡುವಂತೆ ಮಾವನೊಂದಿಗೆ ಸೊಲ್ಲಾಪೂರದಿಂದ ಬಂದು ಹೊಲದಲ್ಲಿ ಅಳಿಯ ರಾಜು  ಜಗಳಕ್ಕಿಳಿದಿದ್ದ.

ಈ ವೇಳೆ ಸಿಟ್ಟಿಗೆದ್ದ ಅಳಿಯ ರಾಜು, ಮಾವ ಈರಪ್ಪನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ,  ಊರಿಗೆ ಬಂದು ವಿದ್ಯುತ್ ಕಂಬ ಏರಿ ಕರೆಂಟ್ ಹಿಡಿಯಲು ಹೋಗಿ ನೆಲಕ್ಕೆ ಬಿದ್ದು ಸಾವಿಗೀಡಾಗಿದ್ದಾನೆ.

ಸುಲೇಪೇಠ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *