Posts Slider

Karnataka Voice

Latest Kannada News

ಹತ್ಯೆ ಮಾಡಿ “ಕಿಮ್ಸ್”ಗೆ ಬಂದಿದ್ದ ಕಿರಾತಕ- ಅಲ್ಲೇ ಹೆಡಮುರಿಗೆ ಕಟ್ಟಿದ ಪೊಲೀಸರು…!!!

1 min read
Spread the love

ಹುಬ್ಬಳ್ಳಿ: ನಗರದ ವೆಂಕಟೇಶ್ವರ ಕಾಲನಿಯಲ್ಲಿ ಯುವಕನಿಗೆ ಚಾಕು ಇರಿದ ಆರೋಪಿ, ಏನೂ ಆಗಿಲ್ಲವೇನೋ ಎಂಬಂತೆ ತನಗೆ ಚಿಕಿತ್ಸೆ ಪಡೆದುಕೊಳ್ಳಲು ನೇರವಾಗಿ ಕಿಮ್ಸಗೆ ಬಂದಾಗಲೇ ಪೊಲೀಸರು ಹೆಡಮುರಿಗೆ ಕಟ್ಟಿದ್ದಾರೆ.

ಅಸ್ಲಂ ಎಂಬಾತನೊಂದಿಗೆ ಸ್ಮಾರ್ಟ್ ವಾಚ್ ಸಂಬಂಧವಾಗಿ ಮಂಜುನಾಥ ಜಗಳ ತೆಗೆದಿದ್ದ. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಮಂಜುನಾಥ, ಅಸ್ಲಂಗೆ ತರಕಾರಿ ಕತ್ತರಿಸುವ ಚಾಕುವಿನಿಂದ ಹಲ್ಲೆ ಮಾಡಿದ್ದ. ಇದೇ ಸಮಯದಲ್ಲಿ ಆತನಿಗೂ ಗಾಯವಾಗಿದೆ. ಹಾಗಾಗಿ, ಹೊಡೆಸಿಕೊಂಡ ಅಸ್ಲಂ ಏನಾಗಿದ್ದಾನೆ ಎಂಬುದು ಗೊತ್ತೆ ಇಲ್ಲದಂತೆ, ತನಗೆ ಚಿಕಿತ್ಸೆ ಪಡೆಯಲು ಕಿಮ್ಸಗೆ ಬಂದಿದ್ದಾನೆ.

ಅಸ್ಲಂನನ್ನ ಕಿಮ್ಸಗೆ ಸಾಗಿಸಿದರೂ ತೀವ್ರ ರಕ್ತಸ್ರಾವವಾಗಿ ಸಾವಿಗೀಡಾಗಿದ್ದಾನೆ. ಆರೋಪಿ ಮಂಜುನಾಥನನ್ನ ಪೊಲೀಸರು ಬಂಧಿಸಿ, ಮುಂದಿನ ಕ್ರಮ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *