Posts Slider

Karnataka Voice

Latest Kannada News

ತಬ್ಬಲಿ ಮಗನನ್ನ ಹತ್ಯೆ ಮಾಡಿದ ಚಿಕ್ಕಪ್ಪ ಅಂದರ್: ಮಲಗಿದ್ದವನನ್ನೇ ಕೊಚ್ಚಿದ ಧಾರವಾಡದವ…!

Spread the love

ಧಾರವಾಡ: ತನ್ನ ಸಹೋದರ ಮಗನನ್ನ ಮಲಗಿದ ಜಾಗದಲ್ಲೇ ಹರಿತವಾದ ಆಯುಧದಿಂದ ಹೊಡೆದು, ಸತ್ತ ನಂತರ ಪರಾರಿಯಾಗಿದ್ದ ವ್ಯಕ್ತಿಯನ್ನ ಬಂಧನ ಮಾಡುವಲ್ಲಿ ಧಾರವಾಡದ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಧಾರವಾಡದ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೋದ ಬಳಿಯಿರುವ ಮನೆಯಲ್ಲಿಯೆ ಆಕಾಶ ಕೋಟೂರ ಎಂಬ ಯುವಕನನ್ನ ಆತನ ಚಿಕ್ಕಪ್ಪನಾದ ಪ್ರಕಾಶ ಕೋಟೂರ ಮನೆಯಲ್ಲಿ ಮಲಗಿದಾಗ ಕೊಲೆ ಮಾಡಿ ಪರಾರಿಯಾಗಿದ್ದ.

ತನ್ನ ಸಹೋದರನ ಮಗ ಮನೆಯಲ್ಲಿ ಕುಡಿದು ಬಂದು ಬಹಳಷ್ಟು ಕಿರಿಕಿರಿಯುಂಟು ಮಾಡುತ್ತಾನೆಂದು ಅವನು ಮಲಗಿದಾಗಲೇ ಹೊಡೆದು ಕೊಲೆ ಮಾಡಿದ್ದ ಚಿಕ್ಕಪ್ಪ, ಆತ ಸಾವಿಗೀಡಾಗಿದ್ದು ಕನ್ ಫರ್ಮ್ ಆದ ತಕ್ಷಣವೇ ಪರಾರಿಯಾಗಿದ್ದ.

ಘಟನೆಯ ಬಗ್ಗೆ ಮಾಹಿತಿ ಪಡೆದು ತನಿಖೆ ನಡೆಸುತ್ತಿದ್ದ ಧಾರವಾಡ ಉಪನಗರ ಠಾಣೆ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕೊಲೆಯನ್ನ ಒಬ್ಬನೇ ಮಾಡಿದ್ದಾನಾ.. ಜೊತೆಗೆ ಯಾರಿದ್ದರೂ ಎಂಬ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆಂದು ಹೇಳಲಾಗಿದೆ.

ಆಕಾಶನನ್ನ ಕೇವಲ ಕುಡಿದು ಬಂದು ಗಲಾಟೆ ಮಾಡುತ್ತಾನೆಂದುಕೊಂಡು ಕೊಲೆ ಮಾಡಲಾಗಿದೇಯಾ ಅಥವಾ ಆಸ್ತಿಗಾಗಿ ಕೊಲೆ ನಡೆದಿದೇಯಾ ಎಂಬ ಬಗ್ಗೆಯೂ ವಿಚಾರಣೆ ನಡೆದಿದೆಯಂದು ಹೇಳಲಾಗಿದೆ.


Spread the love

Leave a Reply

Your email address will not be published. Required fields are marked *