ಪೈರೋಜ ಪಠಾಣ ಕೊಂದಿದ್ದು “ಮೊಹ್ಮದ ಶಾ”- ಆತನ ಹಿಂದೆ ಬೇರೆಯವರು ಇದ್ದಾರೆ: ಅಬ್ದುಲ ದೇಸಾಯಿ ಗಂಭೀರ ಆರೋಪ…
ಧಾರವಾಡ: ನಗರದ ಹಾಶ್ಮಿ ನಗರದಲ್ಲಿ ನಡೆದ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ಅವರ ಭೀಕರ ಹತ್ಯೆ ಪ್ರಕರಣಕ್ಕೆ ಈಗ ಸ್ಪೋಟಕ ತಿರುವು ಸಿಕ್ಕಿದ್ದು, ಕೊಲೆಯನ್ನ ಸ್ವಪಕ್ಷದ ನಾಯಕನ ಕೈವಾಡದಿಂದ ಗ್ರಾಮೀಣ ಭಾಗದ ಯುವ ಕಾಂಗ್ರೆಸ್ ಅಧ್ಯಕ್ಷನೇ ಮಾಡಿದ್ದಾನೆ ಎಂದು ಯುವ ಕಾಂಗ್ರೆಸ್ ಮುಖಂಡ ಅಬ್ದುಲ್ ದೇಸಾಯಿ ನೇರ ಆರೋಪ ಮಾಡಿದ್ದಾರೆ.
ಕೊಲೆಗೆ ಕಾರಣವೇನು? – ಅಬ್ದುಲ್ ದೇಸಾಯಿ ಹೇಳಿಕೆ
ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಬ್ದುಲ್ ದೇಸಾಯಿ, “ಧಾರವಾಡ ಗ್ರಾಮೀಣ ಭಾಗದ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹ್ಮದ ಶಾ ಎಂಬಾತನೇ ಫೈರೋಜ್ ಪಠಾಣ್ ಅವರನ್ನು ಕೊಲೆ ಮಾಡಿದ್ದಾನೆ” ಎಂದು ಗಂಭೀರವಾಗಿ ದೂಷಿಸಿದ್ದಾರೆ.
ರಾಜಕೀಯ ವೈಷಮ್ಯ ಅಥವಾ ಆಂತರಿಕ ಭಿನ್ನಾಭಿಪ್ರಾಯ ಈ ಘಟನೆಗೆ ಪ್ರೇರಣೆಯಾಗಿರಬಹುದು ಎಂಬ ಸಂಶಯಕ್ಕೆ ಈ ಹೇಳಿಕೆ ಪುಷ್ಟಿ ನೀಡಿದೆ. ಹೇಳಿಕೆ ಇಲ್ಲಿದೆ ನೋಡಿ.
ಮೃತ ಫೈರೋಜ್ ಪಠಾಣ್ ಅವರು ತಮ್ಮ ಮನೆಯಲ್ಲಿದ್ದಾಗ ನಾಲ್ವರು ಅಪರಿಚಿತರು ಏಕಾಏಕಿ ನುಗ್ಗಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ತೀವ್ರ ರಕ್ತಸ್ರಾವದಿಂದ ಫೈರೋಜ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಈ ಘಟನೆಯಿಂದ ಇಡೀ ಧಾರವಾಡ ನಗರ ಬೆಚ್ಚಿಬಿದ್ದಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆಕ್ರೋಶ ಮನೆಮಾಡಿದೆ.
ಅಬ್ದುಲ್ ದೇಸಾಯಿ ಅವರ ಹೇಳಿಕೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಆರೋಪಿತ ಮೊಹ್ಮದ ಶಾ ಅವರ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಮೃತ ಪೈರೋಜ್ ತಾಯಿ ಹೇಳಿಕೆ ಇಲ್ಲಿದೆ ನೋಡಿ..
-
- ವಿಶೇಷ ತಂಡ: ಉಪನಗರ ಠಾಣೆ ಪೊಲೀಸರು ಈಗಾಗಲೇ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.
- ಭದ್ರತೆ: ಹಾಶ್ಮಿ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.
