485 ರೂಪಾಯಿಗಾಗಿ ಡಬಲ್ ಮರ್ಡರ್: ಆರೋಪಿ ಅಭಿ ಬಂಧನ…

ಮಲಗಿದವರನ್ನ ಹರಿತವಾದ ಆಯುಧದಿಂದ ಹತ್ಯೆಗೈದಿದ್ದ
ಪಾಪಿಯನ್ನ ಹೆಡಮುರಿಗೆ ಕಟ್ಟಿದ ಪೊಲೀಸರು..
ಮೈಸೂರು: ಕೇವಲ ನಾಲ್ಕುನೂರಾ ಎಂಬತೈದು ರೂಪಾಯಿಗೆ ಡಬಲ್ ಮರ್ಡರ್ ಮಾಡಿರುವ ಪ್ರಕರಣವನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಣಸೂರಿನಲ್ಲಿ ಡಬಲ್ ಮರ್ಡರ್ ಮಾಡಿದ ಆರೋಪಿಯನ್ನ ಅಭಿಷೇಕ (26) ಅಲಿಯಾಸ್ ಅಭಿ ಎಂದು ಗುರುತಿಸಲಾಗಿದ್ದು, ಆರೋಪಿಯು ವೆಂಕಟೇಶ್ (75), ಷಣ್ಮುಖ (65) ಕೊಲೆ ಮಾಡಿ ಪರಾರಿಯಾಗಿದ್ದ.
ಹುಣಸೂರಿನ ಮಿಸ್ಬಾ ಸಾಮಿಲ್ನಲ್ಲಿ ಕೊಲೆ ಮಾಡಿ ವೆಂಕಟೇಶ್ ಬಳಿ ಇದ್ದ 485 ರೂಪಾಯಿ ತೆಗೆದುಕೊಂಡು ಅಭಿ ಪರಾರಿಯಾಗಿದ್ದ.
ರಾಡಿನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದ ಆರೋಪಿ ಅಭಿಯ ಚಲನವಲನಗಳು ಸಾಮಿಲ್ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಕಾರ್ಯಾಚರಣೆ ವೇಳೆಯಲ್ಲಿ ಶ್ವಾನ ಸಹ ಸಾಮಿಲ್ನಲ್ಲಿ ಸುತ್ತಾಡಿ ಅಭಿ ಮನೆ ಬಳಿ ನಿಂತಿತ್ತು. ಈ ಹಿಂದೆ ಹಲವು ಕಳ್ಳತನ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅಭಿ, ದಿನ ನಿತ್ಯ ಗಾಂಜಾ, ಸೆಲ್ಯೂಷನ್ ಸೇದಿ ಜನರಿಗೆ ಕಿರುಕುಳ ನೀಡುತ್ತಿದ್ದನಲ್ಲದೇ, ಜಾತ್ರೆಗಳಲ್ಲಿ ಕಳ್ಳತನ ಮಾಡುತ್ತಿದ್ದ.