Posts Slider

Karnataka Voice

Latest Kannada News

ದೇವಾಲಯದಲ್ಲೇ ಮೂರು ಕೊಲೆ: ಬೆಳ್ಳಂಬೆಳಿಗ್ಗೆ ಹೌಹಾರಿದ ಭಕ್ತರು

1 min read
Spread the love

ಮಂಡ್ಯ: ದೇವಾಲಯವನ್ನ ಕಳ್ಳತನ ಮಾಡಲು ಅಡ್ಡಿ ಮಾಡಬಹುದೆಂಬ ಆತಂಕದಿಂದ ಮೂವರನ್ನ ದೇವಸ್ಥಾನದಲ್ಲೇ ಕೊಲೆ ಮಾಡಿ ಹುಂಡಿಯನ್ನ ಕದ್ದೋಯ್ದ ಘಟನೆ ಮಂಡ್ಯದ ಗುತ್ತಲಿನ ಅರ್ಕೇಶ್ವರ ದೇವಸ್ಥಾನದಲ್ಲಿ ನಡೆದಿದೆ.

ಭಕ್ತರು ಬೆಳಗಿನ ಜಾವ ಮಂದಿರಕ್ಕೆ ಬಂದಾಗಲೇ ರಕ್ತದ ಮಡುವಿನಲ್ಲಿ ಮೂವರು ಶವವಾಗಿ ಬಿದ್ದಿದ್ದು, ಭಕ್ತರು ಗಾಬರಿಯಿಂದ ಮನೆಗೆ ಹೋದ ಪ್ರಸಂಗಗಳು ನಡೆದಿವೆ.

ದೇವಾಲಯದ ಕಾವಲುಗಾರರಾದ ಪ್ರಕಾಶ(೩೪), ಆನಂದ೩೩), ಗಣಪತಿ(೩೫) ಎಂಬುವವರೇ ಕೊಲೆಯಾದ ದುರ್ಧೈವಿಗಳು. ದೇವಾಲಯದಲ್ಲಿ ತಮಡಿಗಳಾಗಿ  ಕೆಲಸ ಮಾಡ್ತಿದ್ದ  ಇವರು ನಿನ್ನೆಯೂ ಕಾರ್ಯನಿರ್ವಹಿಸಿ ಮಲಗಿದ್ದರು.

ಆರ್ಕೇಶ್ವರ ದೇವಸ್ಥಾನ ಈ ಭಾಗದಲ್ಲಿ ಸಾಕಷ್ಟು ಪ್ರಸಿದ್ಧ ಹೊಂದಿದ್ದು, ನೂರಾರೂ ಜನ ದಿನಂಪ್ರತಿ ಭಕ್ತಿಗಾಗಿ ದೇವಸ್ಥಾನಕ್ಕೆ ಬರುತ್ತಾರೆ. ಇದನ್ನೇಲ್ಲ ಗಮನಿಸಿರುವ ಕಳ್ಳರ ತಂಡ, ಇಂತಹ ದುಷ್ಕೃತ್ಯ ನಡೆಸಿದ್ದು, ಹುಂಡಿಯನ್ನ ಕದ್ದು ದೂರದಲ್ಲಿ ಒಡೆದು, ಒಗೆದು ಹೋಗಿದ್ದಾರೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಂಡ್ಯ ಡಿವೈಎಸ್ಪಿ ನವೀನ್ ಸೇರಿದಂತೆ ಮಂಡ್ಯ ಪೂರ್ವ ಠಾಣೆಯ ಸಿಪಿಐ  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

Leave a Reply

Your email address will not be published. Required fields are marked *