Posts Slider

Karnataka Voice

Latest Kannada News

ಮಗನ ಸಾವಿನ ಸುದ್ಧಿಗೆ ತಾಯಿಯೂ ಬಲಿ: ಹಾವೇರಿಯಲ್ಲಿ ಹೃದಯವಿದ್ರಾವಕ ಘಟನೆ

1 min read
Spread the love

ಹಾವೇರಿ: ಬಿಳಿ ಕಾಮಾಲೆ ರೋಗದಿಂದ ಬಳಲುತ್ತಿದ್ದ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಮರಣ ಹೊಂದಿದ್ದು, ಈ ಸುದ್ದಿ ತಿಳಿದ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ಸಂಭವಿಸಿದೆ.

ಹಾವೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದ ಬಸವರಾಜ ರಾಮಣ್ಣ ತೆಪ್ಪದ, ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದ. ಈ ವಿಷಯವನ್ನ ಸಂಬಂಧಿಕರು ಮನೆಗೆ ತಿಳಿಸಿದ ಕೆಲವೇ ನಿಮಿಷದಲ್ಲಿ ತಾಯಿ ಮೈನಾವತಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.

ಇಡೀ ಪ್ರಕರಣ ಗ್ರಾಮದಲ್ಲಿ ಸೂತಕದ ಛಾಯೆಯನ್ನ ಮೂಡಿಸಿದ್ದು, ಮಗನ ಮೇಲಿನ ತಾಯಿ ಪ್ರೀತಿಯನ್ನ ಎಲ್ಲರೂ ಸ್ಮರಿಸುವಂತಾಗಿದೆ.


Spread the love

Leave a Reply

Your email address will not be published. Required fields are marked *