Posts Slider

Karnataka Voice

Latest Kannada News

ಹನಿಟ್ರ್ಯಾಪ್ ಪ್ರಕರಣ: ತಾಯಿ ಮಗನ ಬಂಧನ

Spread the love

ವಿಜಯನಗರ(ಹೊಸಪೇಟೆ): ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದ ದೂರಿನ ಹಿನ್ನೆಲೆಯಲ್ಲಿ ಬಡಾವಣೆ ಠಾಣೆಯ ಪೊಲೀಸರು ಹೊಸಪೇಟೆಯ ಎಂ.ಜೆ.ನಗರದ ಗೀತಾ ಮತ್ತು ಅವರ ಮಗ ವಿಷ್ಣು ಎಂಬುವವರನ್ನ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹೊಸಪೇಟೆ ಎಂ.ಜೆ.ನಗರದ 6ನೇ ಕ್ರಾಸ್ ಬಳಿ ಸಾನ್ವಿ ಸ್ಟೀಲ್ಸ್ ಮಳಿಗೆ ಹೊಂದಿದ್ದ ಆಂದ್ರ ಮೂಲದ ಉದ್ಯಮಿ ವಿ.ಸುಬ್ಬಾರೆಡ್ಡಿ ಅವರನ್ನ ಪರಿಚಯ ಮಾಡಿಕೊಂಡ ಅದೇ ರಸ್ತೆಯ ಗೀತಾ ಮತ್ತು ಅವರ ಮಗ ವಿಷ್ಣು, ಮನೆಗೆ ಕರೆದು ಪಾನೀಯದಲ್ಲಿ ಮತ್ತು ಬರುವ ಪುಡಿ ಬೆರೆಸಿ ಪ್ರಜ್ಞೆ ತಪ್ಪಿಸಿ ಪೋಟೋ ತೆಗೆದಿದ್ದಾರೆ. ನಂತರ ಸುಬ್ಬಾರೆಡ್ಡಿಗೆ ಪೋನ್ ಮಾಡಿ ನಗ್ನ ಪೋಟೋಗಳನ್ನ ಬಯಲು ಮಾಡುವ ಬೆದರಿಕೆವೊಡ್ಡಿದ್ದರೆಂದು ಹೇಳಲಾಗಿದೆ.

ಗೀತಾ ಹಾಗೂ ಅವರ ಮಗ ವಿಷ್ಣು ಸುಬ್ಬಾರೆಡ್ಡಿಯವರ ಮನೆಗೆ ನುಗ್ಗಿ 15 ಲಕ್ಷ ನಗದು ಹಾಗೂ ಬಂಗಾರದ ಒಡವೆಗಳನ್ನು ಕದ್ದಿದ್ದಾರೆಂದು ದೂರು ನೀಡಿದ್ದರು.

ದೂರನ್ನ ದಾಖಲು ಮಾಡಿಕೊಂಡ ಪೊಲೀಸರು ತಾಯಿ-ಮಗನನ್ನ ಬಂಧನ ಮಾಡಿದ್ದಾರೆ. ಬಂಧನ ವೇಳೆಯಲ್ಲಿ ಗೀತಾಳ ಮನೆಯಲ್ಲಿ 2.75 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.

ರಾಜ್ಯದ ಮಂತ್ರಿಗಳ ಸಿಡಿ ಪ್ರಕರಣ ಹೊರ ಬಂದ ನಂತರ, ಸದ್ದಿಲ್ಲದೇ ಜೈಲು ಪಾಲಾಗಿರುವ ತಾಯಿ ಮಗ ಅದೇಷ್ಟು ಜನರಿಗೆ ಮೋಸ ಮಾಡಿದ್ದಾರೋ ಏನೋ. ಇಂಥವರನ್ನ ಪೊಲೀಸರು ಮತ್ತಷ್ಟು ತನಿಖೆಗೆ ಒಳಪಡಿಸುವ ಅವಶ್ಯಕತೆಯಿದೆಯಲ್ಲವೇ..


Spread the love

Leave a Reply

Your email address will not be published. Required fields are marked *