ಮೂರುಸಾವಿರ ಮಠದ ಉತ್ತರಾಧಿಕಾರಿ ನಾನೇ: ಶ್ರೀ ದಿಂಗಾಲೇಶ್ವರ ಶ್ರೀಗಳ ಹೇಳಿಕೆ
1 min readಹುಬ್ಬಳ್ಳಿ: ಮೂರುಸಾವಿರ ಮಠದ ಉತ್ತರಾಧಿಕಾರಿಯಾಗಲು ನಾನೂ ಯಾರ ಮನೆಗೂ ಬಂದಿಲ್ಲ. ಮಠದ ಗುರುಗಳು ಸೇರಿದಂತೆ ಪ್ರಮುಖರು ಒತ್ತಾಯ ಮಾಡಿದ್ದರಿಂದ ನಾನು ಒಪ್ಪಿಕೊಂಡಿದ್ದೆ. ಹೀಗಾಗಿ ನಾನೇ ಅಲ್ಲಿನ ಉತ್ತರಾಧಿಕಾರಿ ಎಂದು ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸ್ವಾಮೀಜಿ, ನಾನು, ನನ್ನ ಬಗ್ಗೆ ಅನೇಕರು ಊಹಾಪೋಹ ಎಬ್ಬಿಸುತ್ತಿದ್ದಾರೆ. ಅಸಲಿಗೆ ನಾನು ಶ್ರೀಮಠದ ಗೌರವ ಉಳಿಸಲು ಸದಾಕಾಲ ಪ್ರಯತ್ನ ಮಾಡುತ್ತ ಬಂದಿದ್ದೇನೆ. ಈಗಲಾದರೂ ಸತ್ಯವನ್ನ ಶ್ರೀಗಳು ಹಾಗೂ ಪ್ರಮುಖರು ನುಡಿಯಬೇಕೆಂದು ಕೋರಿದ್ದಾರೆ. ಮುಂಬರುವ ರವಿವಾರದೊಳಗೆ ಎಲ್ಲರೂ ಉತ್ತರ ಕೊಡಬೇಕೆಂದು ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಮನವಿ ಮಾಡಿಕೊಂಡಿದ್ದಾರೆ.