Posts Slider

Karnataka Voice

Latest Kannada News

ವೀರಶೈವ ಲಿಂಗಾಯತ ಮಹಾಸಭಾ “ರಾಜ್ಯ ಘಟಕ” ಚುನಾವಣೆಯಲ್ಲಿ “ಮೋಹನ ಅಸುಂಡಿ” ಜಯಭೇರಿ…

1 min read
Spread the love

ಹುಬ್ಬಳ್ಳಿ: ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿಯ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 10911 ಮತಗಳನ್ನ ಪಡೆದು ಆಯ್ಕೆಯಾಗುವ ಮೂಲಕ ಜಯ ಸಾಧಿಸಿದ್ದಾರೆ.

ಸಮಾಜದ ಒಳತಿಗಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತ ಬಂದಿರುವ ಮೋಹನ ಅಸುಂಡಿಯವರಿಗೆ ಈ ಜಯ ಮತ್ತಷ್ಟು ಹುಮ್ಮಸ್ಸು ಹೆಚ್ಚಿಸಿದೆ.

ಮೋಹನ ಅಸುಂಡಿಯವರು ಮೂರುಸಾವಿರ ಮಠದ ಜಾತ್ರಾ ಮಹೋತ್ಸವದ ಅಧ್ಯಕ್ಷರಾಗಿಯೂ, ದಾಸೋಹ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾಗಿ, ಸಭಾನಾಯಕರಾಗಿಯೂ ಜನಪರ ಕಾರ್ಯಗಳನ್ನ ಮಾಡುತ್ತ ಬಂದಿದ್ದಾರೆ. ಮಹಾಸಭಾದ ಯುವ ಘಟಕದ ಜಿಲ್ಲಾಧ್ಯಕ್ಷ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿಯೂ ಮೋಹನ ಅಸುಂಡಿ ಗಮನ ಸೆಳೆದಿದ್ದಾರೆ.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ರೈತರ ಪರವಾದ ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದರು. ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷರಾಗಿದ್ದ ಮೋಹನ ಅಸುಂಡಿಯವರು, ಹಾಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ಕಾಂಗ್ರೆಸ್ ಪಕ್ಷದ ಹಲವು ಜವಾಬ್ದಾರಿಗಳನ್ನ ನಿಭಾಯಿಸಿಕೊಂಡು ಸಮಾಜದ ಏಳಿಗೆಗೆ ಸದಾಕಾಲ ಪ್ರೇರಪಣೆಯಾಗುವ ರೀತಿಯಲ್ಲಿ ನಡೆದುಕೊಂಡು ಬಂದಿರುವುದೇ, ಇವತ್ತಿನ ಗೆಲುವಿಗೆ ಮುಖ್ಯ ಕಾರಣವಾಗಿದೆ.


Spread the love

Leave a Reply

Your email address will not be published. Required fields are marked *