Posts Slider

Karnataka Voice

Latest Kannada News

ಮೋದಿ ಟೀಕೆ ಮಾಡುವವ ರಾಹುಲ್ ಗಾಂಧಿ ಒಬ್ಬನೇ: ಸಂಸದ ಜಿ.ಎಸ್.ಬಸವರಾಜು

1 min read
Spread the love

ತುಮಕೂರು: ಟೀಕೆ ಮಾಡದಿದ್ದರೆ ಪ್ರಜಾಪ್ರಭುತ್ವವೇ ಅಲ್ಲಾ. ಹಾಗಾಗಿ ಪ್ರಧಾನಿ ಮೋದಿ ವಿರುದ್ದ ಟೀಕೆ ಮಾಡುತ್ತಾರೆ. ಕೊರೋನಾ ವಿರುದ್ದ ಪ್ರಧಾನಿ ಮೋದಿ ತೆಗೆದುಕೊಂಡ ಕಾರ್ಯಕ್ರಮ ಪ್ರಪಂಚಕ್ಕೆ ಮಾದರಿಯಾಗಿದೆ. ಆದರೂ ರಾಹುಲ್ ಗಾಂಧಿ ಒಬ್ಬರೇ ಟೀಕೆ ಮಾಡುತ್ತಾರೆ ಎಂದು ಸಂಸದ ಜಿ.ಎಸ್.ಬಸವರಾಜು ವ್ಯಂಗ್ಯವಾಡಿದರು.

ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದರು, ಅಮೆರಿಕಾದಂತಹ ಮುಂದುವರೆದ ರಾಷ್ಟ್ರ ಕೊರೋನಾದಿಂದ ತತ್ತರಿಸಿ ಹೋಗಿದೆ. ಭಾರತದಲ್ಲಿ ಪ್ರಧಾನಿ ಮೋದಿ ಕೈಗೊಂಡ ಕ್ರಮದಿಂದ ಸಾವು ಹಾಗೂ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಸೋಂಕಿತರಲ್ಲಿ 85% ರಷ್ಟು ಜನ ಗುಣಮುಖರಾಗುತ್ತಿದ್ದಾರೆ ಎಂದು ಹೇಳಿದರು.

ಕೊರೋನಾ ನಿಯಂತ್ರಣ ಮಾಡಿದ್ದೂ ಪ್ರಧಾನಿ ಮೋದಿಯ ಎರಡನೇ ಅವಧಿಯ ಮೊದಲ ವರ್ಷದ ಮಹತ್ವದ ಸಾಧನೆಯಲ್ಲಿ ಒಂದು ಎಂದು ಸಂಸದ ಬಸವರಾಜು ಹೇಳಿದರು.


Spread the love

Leave a Reply

Your email address will not be published. Required fields are marked *

You may have missed