ಅಮೆಜಾನ್-ಪ್ಲೀಪ್ ಕಾರ್ಟ್ ನಿರ್ಬಂಧಿಸಿ: ಸ್ಥಳೀಯ ವ್ಯಾಪಾರಿಗಳ ಗೋಳು ಕೇಳಿದ ಶಾಸಕ…!

ಧಾರವಾಡ: ಲಾಕ್ ಡೌನ್ ಸಮಯದಲ್ಲಿ ಸ್ಥಳೀಯ ವ್ಯಾಪಾರ ವಹಿವಾಟು ಬಂದ್ ಮಾಡಿ ಆನ್ ಲೈನ್ ವ್ಯಾಪಾರಕ್ಕೆ ಅವಕಾಶ ನೀಡಿದರೇ, ಸ್ಥಳೀಯ ವ್ಯಾಪಾರಿಗಳು ಮೂಲೆಗುಂಪಾಗಬೇಕಾಗುತ್ತದೆ ಎಂದು ಎಐಎಂಆರ್ ಎ ಕರ್ನಾಟಕ ಹೇಳಿಕೊಂಡಿದ್ದು, ಹೀಗಾಗಿ ಆನ್ ಲೈನ್ ವ್ಯಾಪಾರವನ್ನ ನಿರ್ಬಂಧಿಸುವಂತೆ ಶಾಸಕ ಅಮೃತ ದೇಸಾಯಿ ಅವರಿಗೆ ಮನವಿ ಮಾಡಿಕೊಂಡರು.

ಅಮೆಜಾನ್ ಮತ್ತು ಪ್ಲೀಪ್ ಕಾರ್ಟ್ ನಿಂದ ನಿರಂತರವಾಗಿ ವ್ಯಾಪಾರ ನಡೆಯುತ್ತಿದೆ. ಯಾವುದೇ ಮುಂಜಾಗ್ರತೆ ಇಲ್ಲದೇ, ಮನೆಗಳಿಗೆ ತಲುಪು ವಸ್ತುಗಳಿಂದ ಕೊರೋನಾ ಬರುವುದಿಲ್ಲವೇ ಎಂದು ಪ್ರಶ್ನಿಸಿದ, ಧಾರವಾಡ ಮೊಬೈಲ್ ವರ್ತಕರು, ತಕ್ಷಣ ಇವುಗಳನ್ನ ಬಂದ್ ಮಾಡಿಸುವಂತೆ ಕೇಳಿಕೊಂಡರು.
ಮನವಿ ಸ್ವೀಕರಿಸಿದ ಶಾಸಕ ಅಮೃತ ದೇಸಾಯಿ ಅವರು, ಈ ಬಗ್ಗೆ ಸಮಗ್ರವಾಗಿ ಅಧಿಕಾರಿಗಳೊಂದಿಗೆ ಮಾತನಾಡಿ, ಸೂಕ್ತ ಕ್ರಮವನ್ನ ಜರುಗಿಸಲು ಪ್ರಯತ್ನ ಪಡುವುದಾಗಿ ಹೇಳಿದರು.
ಸ್ಥಳೀಯ ವ್ಯಾಪಾರಿಗಳಿಗೆ ಯಾವುದೇ ಥರದ ಅನ್ಯಾಯವಾಗದ ರೀತಿಯಲ್ಲಿ ಕ್ರಮವನ್ನ ಜರುಗಿಸಲು ತಾವೂ ಕೂಡಾ ಮುಂಚೂಣಿಯಲ್ಲಿರುವುದಾಗಿ ಶಾಸಕರು ಹೇಳಿದರು.