Posts Slider

Karnataka Voice

Latest Kannada News

“ತರಡಿ”ನಲ್ಲಿ ತ್ರಿಶೂಲ ಚುಚ್ಚಿಕೊಂಡ ‘ಮೈಲಾರ’: ಧಾರವಾಡದ ನವಲೂರಲ್ಲಿ ವಿಚಿತ್ರ ಘಟನೆ…

Spread the love

ಧಾರವಾಡ: ತಂದೆ ಮೊಬೈಲ್ ಗೆ ಕರೆನ್ಸಿ ಹಾಕಲಿಲ್ಲವೆಂದು ಗೊರಪ್ಪನ ವೇಷ ತೊಟ್ಟು ತ್ರಿಶೂಲವನ್ನ ತರಡಿನಲ್ಲಿ ಸಿಕ್ಕಿಸಿಕೊಂಡ ಯುವಕನೋರ್ವ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿರುವ ಪ್ರಕರಣವೊಂದು ಧಾರವಾಡ ತಾಲೂಕಿನ ನವಲೂರ ಗ್ರಾಮದಲ್ಲಿ ನಡೆದಿದೆ.

ನತದೃಷ್ಟ ತಂದೆ ಮಗನ ಬೆಡ್ ಬಳ

ನವಲೂರಿನ 20 ವರ್ಷದ ಮೈಲಾರಿ ತಿಪ್ಪಣ್ಣವರ ಎಂಬಾತನೇ ತ್ರಿಶೂಲವನ್ನ ತರಡಿನಲ್ಲಿ ಸಿಕ್ಕಿಸಿಕೊಂಡು ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಚಿಕಿತ್ಸೆ ಪಡೆಯುತ್ತಿರುವ ಮೈಲಾರಿ

ಮೊಬೈಲ್ ಕರೆನ್ಸಿ ಹಾಕುವಂತೆ ತಂದೆಗೆ ಮೈಲಾರಿ ಕೇಳಿಕೊಂಡನಂತೆ. ಆದರೆ, ತಂದೆ ಇದಕ್ಕೆ ಒಪ್ಪಿಕೊಂಡಿಲ್ಲ. ಇದರಿಂದ ರೋಸಿ ಹೋದ ಮೈಲಾರಿ, ಗೊರಪ್ಪನ ಉಡುಪು ಹಾಕಿಕೊಂಡು ಜೊತೆಗೆ ತ್ರಿಶೂಲವನ್ನ ತೆಗೆದುಕೊಂಡು ಹೋಗಿ, ಆ ಜಾಗದಲ್ಲಿ ಸಿಗಿಸಿಕೊಂಡು ನಿತ್ರಾಣವಾಗಿ ಬಿದ್ದಿದ್ದಾನೆ. ವಿಷಯ ಗೊತ್ತಾಗಿ, ಆತನನ್ನ ಕಿಮ್ಸಗೆ ದಾಖಲು ಮಾಡಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.


Spread the love

Leave a Reply

Your email address will not be published. Required fields are marked *