ಸಲೀಂ ಅಹ್ಮದರಿಗೆ ಕಾಂಗ್ರೆಸ್ ಟಿಕೆಟ್- ಪಕ್ಷ ನಿಷ್ಠೆಯ ವ್ಯಕ್ತಿಗೆ ಮಣೆ…!

ನವದೆಹಲಿ: ಧಾರವಾಡ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಸಲೀಂ ಅಹ್ಮದರನ್ನೇ ಪೈನಲ್ ಮಾಡಿರುವುದು ಖಚಿತಗೊಂಡಿದೆ.


ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನ ಬಾಕಿಯಿರುವಾಗಲೇ ಟಿಕೆಟ್ ಅಧಿಕೃತವಾಗಿ ಘೋಷಣೆಯಾಗಲಿದೆ. ಹುಬ್ಬಳ್ಳಿ-ಧಾರವಾಡದ ಕೆಲವು ಮುಸ್ಲಿಂ ನಾಯಕರು ನಿರಂತರವಾಗಿ ಪ್ರಯತ್ನ ನಡೆಸಿದರೂ ಕೂಡಾ, ಪಕ್ಷ ಸಜ್ಜನ ರಾಜಕಾರಣಿ ಸಲೀಂ ಅಹ್ಮದರಿಗೆ ಮಣೆ ಹಾಕಿದೆ.
ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ಸೋತಿದ್ದರೂ, ಪಕ್ಷದ ಸಂಘಟನೆಯಲ್ಲಿ ತಮ್ಮನ್ನ ನಿರಂತರವಾಗಿ ತೊಡಗಿಸಿಕೊಂಡಿದ್ದರು. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪಕ್ಷದ ಕಾರ್ಯಕರ್ತರು ಸಲೀಂ ಅಹ್ಮದರ ಜೊತೆ ಒಡನಾಟ ಹೊಂದಿದ್ದಾರೆ.
ಧಾರವಾಡ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಈಗಾಗಲೇ ಪ್ರದೀಪ ಶೆಟ್ಟರ ಅವರನ್ನ ಪೈನಲ್ ಮಾಡಿದ್ದು, ಸಲೀಂ ಅಹ್ಮದರನ್ನ ಕಾಂಗ್ರೆಸ್ ಪೈನಲ್ ಮಾಡಿದೆ. ಈ ಕ್ಷೇತ್ರದಲ್ಲಿ ಇಬ್ಬರು ಆಯ್ಕೆಯಾಗಬೇಕಾಗಿರುವುದರಿಂದ ಯಾವುದೇ ತೊಂದರೆಯಾಗಲಿಕ್ಕಿಲ್ಲವೆಂಬ ಲೆಕ್ಕಾಚಾರವಿದೆ.