ಎಂಎಲ್ಸಿ ಚುನಾವಣೆ: ಪ್ರಮುಖರೊಂದಿಗೆ ಸಂತೋಷ ಚವ್ಹಾಣ ಬಿರುಸಿನ ಪ್ರಚಾರ
1 min readಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎಸ್.ವಿ.ಸಂಕನೂರ ಪರವಾಗಿ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ, ಪಕ್ಷದ ಪ್ರಮುಖರೊಂದಿಗೆ ಬಿರುಸಿನ ಪ್ರಚಾರದಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ.
ಇಂದು ನಗರದ ಆದರ್ಶ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಶ್ಚಿಮ ಪದವೀಧರ ಚುನಾವಣೆ ಪ್ರಚಾರವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ಮಾಜಿ ಕೆಎಸ್ಆರ್ಟಿಸಿ ಚೇರ್ಮನ್ ಮಲ್ಲಿಕಾರ್ಜುನ ಸಾಹುಕಾರ್, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ ಚೌಹಾಣ್ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಸಮಯದಲ್ಲಿ ಪದವೀಧರ ಮತದಾರರನ್ನ ಕುರಿತು ಸಂತೋಷ ಚವ್ಹಾಣ ಮಾತನಾಡಿ, ಭಾರತೀಯ ಜನತಾ ಪಕ್ಷ ಶೈಕ್ಷಣಿಕವಾಗಿ ಹಲವು ಮೈಲಿಗಲ್ಲುಗಳನ್ನ ದಾಟಿದೆ. ಉತ್ತಮವಾದ ಯೋಜನೆಗಳನ್ನ ಜಾರಿಗೆ ತರುವಲ್ಲಿ ಸದಾಕಾಲ ಬಿಜೆಪಿ ಮುಂದಿರತ್ತೆ ಎಂದರು.
ಪಶ್ಚಿಮ ಪದವೀಧರ ಕ್ಷೇತ್ರ ಅಭ್ಯರ್ಥಿ ಎಸ್.ವಿ.ಸಂಕನೂರರಿಗೆ ಬೆಂಬಲ ನೀಡುವ ಮೂಲಕ ಬಿಜೆಪಿ ಗೆಲುವಿಗೆ ಮುನ್ನಡಿ ಬರೆಯಬೇಕೆಂದು ಕೋರಿದರು. ಮಹಾನಗರ ಪಾಲಿಕೆ ಮಾಜಿ ಸದಸ್ಯರುಗಳಾದ ಮಹೇಶ್ ಬರ್ಲಿ, ಉಮೇಶ್ ಗೌಡ ಕೌಜಗೇರಿ, ಸಂಚಾಲಕ ತಿಪ್ಪಣ್ಣ ಮಜ್ಜಿಗಿ, ದತ್ತಮೂರ್ತಿ ಕುಲಕರ್ಣಿ, ಮಹೇಂದ್ರ ಕೌತಾಳ, ಇರ್ಫಾನ್ ಶೇಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.